Advertisement

ಭಾರತ ಕೋವಿಡ್ ನಿಂದ ಮುಕ್ತವಾಗಲು ಆಸ್ಟ್ರೇಲಿಯಾ ಪ್ರಧಾನಿ ಪೂಜೆ

03:21 AM May 23, 2021 | Team Udayavani |

ಮೆಲ್ಬರ್ನ್: ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್‌ ಮೊರಿಸನ್‌ ಅವರು ಮೆಲ್ಬರ್ನ್ ನಗರದ ಹರಿಹರ (ಶಿವ ಮತ್ತು ವಿಷ್ಣು) ದೇವಸ್ಥಾನಕ್ಕೆ ಭೇಟಿ ನೀಡಿ ಆದಷ್ಟು ಶೀಘ್ರ ಭಾರತ ಕೊರೊನಾ ಮುಕ್ತವಾಗಲಿ ಎಂದು ಪ್ರಾರ್ಥಿಸಿ ಪೂಜೆ ಸಲ್ಲಿಸಿದ್ದಾರೆ.

Advertisement

ಆಸ್ಟ್ರೇಲಿಯದ ರಾಜ್ಯ ಆಡಳಿತ ಕಮಿಟಿಗೆ ಆಯ್ಕೆಯಾದ ಪ್ರಥಮ ಭಾರತೀಯ ಮೂಲದ ಕನ್ನಡತಿ, ಉಡುಪಿ ಜಿಲ್ಲೆಯ ಪೆರ್ಡೂರು ಮೂಲದ ಶಿಲ್ಪಾ ಹೆಗ್ಡೆ ಮತ್ತು ಅವರ ಪತಿ ಉದ್ಯಮಿ ದಯಾನಂದ ಶೆಟ್ಟಿ ಅವರ ವಿನಂತಿ ಮೇರೆಗೆ ಆಗಮಿಸಿದ ಪ್ರಧಾನಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥಿಸಿದ್ದಾರೆ.

ಆದಷ್ಟು ಶೀಘ್ರ ಭಾರತ ಕೊರೊನಾ ಮುಕ್ತವಾಗಬೇಕು. ಜನ ಸಹಕಾರ ನೀಡಬೇಕು. ಜನರ ಸಹಕಾರದಿಂದ ಇದೀಗ ಆಸ್ಟ್ರೇಲಿಯಾ ಸಂಪೂರ್ಣ ಕೊರೊನಾ ಮುಕ್ತವಾಗಿದೆ. ಅದರಂತೆ ಭಾರತ ಕೂಡ ಆಗಬೇಕು ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next