Advertisement

ನಾಗ್ಪುರ ಪಿಚ್ ನಲ್ಲಿಯೇ ಪ್ರಾಕ್ಟಿಸ್ ಮಾಡುವ ಬಯಕೆಗೆ ತಣ್ಣೀರೆರಚಿದ ಸಿಬ್ಬಂದಿ; ಆಗಿದ್ದೇನು?

08:20 AM Feb 13, 2023 | Team Udayavani |

ನಾಗ್ಪುರ: ಮೊದಲ ಟೆಸ್ಟ್‌ ಮೂರು ದಿನಗಳಲ್ಲಿ ಮುಗಿದ ಕಾರಣ ರವಿವಾರ ನಾಗ್ಪುರದಲ್ಲಿಯೇ ಆಟಗಾರರು ತರಬೇತಿ ನಡೆಸುವ ಆಸ್ಟ್ರೇಲಿಯದ ಯೋಜನೆ ಮೈದಾನ ಸಿಬಂದಿಯ ಎಡವಟ್ಟಿನಿಂದ ರದ್ದುಗೊಂಡಿದೆ.

Advertisement

ರವಿವಾರ ಮಧ್ಯಾಹ್ನ ಆಟಗಾರರ ತರಬೇತಿಗಾಗಿ ಮಧ್ಯದ ಪಿಚ್‌ ಮತ್ತು ತರಬೇತಿ ಪಿಚ್‌ಗಳನ್ನು ಬಿಡಬಹುದೇ ಎಂದು ಆಸ್ಟ್ರೇಲಿಯ ತಂಡದ ಆಡಳಿತವು ಮೈದಾನದ ಸಿಬಂದಿ ಜತೆ ವಿನಂತಿಸಿದ್ದರು.

ಇದರ ಹೊರತಾಗಿಯೂ ಮೈದಾನದ ಸಿಬಂದಿ ಶನಿವಾರ ಸಂಜೆ ಆಟಗಾರರು ಮೈದಾನದಿಂದ ನಿರ್ಗಮಿಸಿದ ಬಳಿಕ ಮಧ್ಯ ಪಿಚ್‌ ಮತ್ತು ತರಬೇತಿ ಪಿಚ್‌ಗೆ ನೀರು ಹಾಕಿದ್ದರಿಂದ ಪ್ರವಾಸಿ ತಂಡ ತನ್ನ ಯೋಜನೆಯನ್ನು ರದ್ದು ಮಾಡಿದೆ.

ನಾಗ್ಪುರದಲ್ಲಿ ನಡೆದಿದ್ದ ಬಾರ್ಡರ್ – ಗಾವಸ್ಕರ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿತ್ತು. ಎರಡನೇ ಪಂದ್ಯ ಫೆ.17ರಿಂದ ಹೊಸದಿಲ್ಲಿಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next