Advertisement

ಮಳೆಗಾಗಿ ವಿಶೇಷ ಪೂಜೆ-ಭಕ್ತರಿಗೆ ಪ್ರಸಾದ

02:59 PM Jul 28, 2019 | Naveen |

ಔರಾದ: ಮಳೆಗಾಲ ಆರಂಭವಾಗಿ ಎರಡು ತಿಂಗಳು ಕಳೆದರೂ ತಾಲೂಕಿನಲ್ಲಿ ವಾಡಿಕೆಯಂತೆ ಮಳೆ ಬಾರದಿರುವುದರಿಂದ ಪಟ್ಟಣದ ಮಾರ್ಕೇಟ್ ವ್ಯಾಪಾರಿಗಳು ಉದ್ಭವಲಿಂಗ ಅಮರೇಶ್ವರ ಮಂದಿರದಲ್ಲಿ ವಿಶೇಷ ಪೂಜೆ ನೆರವೇರಿಸಿದರು.

Advertisement

ಅಮರೇಶ್ವರ ದೇವಸ್ಥಾನದಲ್ಲಿ ಮಹಿಳಾ ಭಜನೆ ಮಂಡಳಿಯ ಸದಸ್ಯರು ಹಾಗೂ ಅಮರೇಶ್ವರ ಭಕ್ತರು ಭಜನೆಯೊಂದಿಗೆ ದೇವರ ಸ್ಮರಣೆ ಮಾಡಿದರು. ಬೆಳಗ್ಗೆಯಿಂದ ರಾತ್ರಿ ತನಕ ದೇವಸ್ಥಾನದಲ್ಲಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಪಟ್ಟಣ ಸೇರಿದಂತೆ ತಾಲೂಕು ಕೇಂದ್ರದ ಸುತ್ತಮುತ್ತಲಿನ ಗ್ರಾಮಸ್ಥರು ಅಮರೇಶ್ವರ ಮಂದಿರಕ್ಕೆ ಆಗಮಿಸಿ ಭಜನೆ ಮಾಡಿ, ಪ್ರಸಾದ ಸ್ವಿಕರಿಸಿದರು.

ಮಳೆಗಾಲ ಆರಂಭವಾಗಿ ಎರಡು ತಿಂಗಳು ಮುಗಿಯುತ್ತ ಬಂದರೂ ತಾಲೂಕಿನಲ್ಲಿ ವಾಡಿಕೆಯಂತೆ ಮಳೆಯಾಗಿಲ್ಲ. ಇದರಿಂದ ಜನ-ಜಾನುವಾರುಗಳ ಸ್ಥಿತಿ ಚಿಂತಾಜನಕವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಪಟ್ಟಣದ ವ್ಯಾಪಾರಸ್ಥರೆಲ್ಲರೂ ಪೂಜೆ ನೆರವೇರಿಸಲಾಗಿದೆ ಎಂದು ಸಂತೋಷ ನಿರ್ಮಳೆ ತಿಳಿಸಿದರು.

ನಂದು ಜ್ಯಾಂತೆ, ಶ್ರೀಕಾಂತ್‌ ಅಲ್ಮಾಜೆ, ಈಶ್ವರ ಚಿಟ್ಮೆ, ರಮೇಶ ಗೌಡ, ಬಾಲಾಜಿ ರಾಗಾ, ಬಸವರಾಜ ಚೌಕಂಪಳ್ಳೆ, ಚಂದ್ರಶೇಖರ ಪಾಟೀಲ, ಶಿವಕುಮಾರ ಇನ್ನಿತರರು ಪ್ರಸಾದ ವಿತರಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next