Advertisement

ಬಿಬಿಎಂಪಿ ಮುಖ್ಯ ಆಯುಕ್ತರ ಹೆಸರಲ್ಲಿ ವಂಚನೆಗೆ ಯತ್ನ

09:18 PM Jul 07, 2022 | Team Udayavani |

ಬೆಂಗಳೂರು:  ಮುಖ್ಯ ಆಯುಕ್ತರ ಹೆಸರು ಹೇಳಿಕೊಂಡು ಬಿಬಿಎಂಪಿಯ ಇತರ ಅಧಿಕಾರಿಗಳಲ್ಲಿ ಲಂಚಕ್ಕೆ ಬೇಡಿಕೆ ಇಟ್ಟಿರುವುದು ಪತ್ತೆಯಾಗಿದ್ದು, ಈ ಕುರಿತು ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಅವರು ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ.

Advertisement

ಗುರುವಾರ ಅಪರಿಚಿತ ವ್ಯಕ್ತಿಯೊಬ್ಬರು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಭಾವಚಿತ್ರ (ಡಿಪಿ)ವನ್ನು ಹಾಕಿಕೊಂಡ 7076522681 ಮೊಬೈಲ್‌ ಸಂಖ್ಯೆಯಿಂದ ಬಿಬಿಎಂಪಿ ಐಟಿ ವಿಭಾಗದ ಉಪ ಮುಖ್ಯ ಐಟಿ ಅಧಿಕಾರಿ ನಾಗೇಶ್‌ ಅವರ ವಾಟ್ಸ್‌ಆ್ಯಪ್‌ಗೆ ಅಮೆಜಾನ್‌ ಗಿಫ್ಟ್ ಕಾರ್ಡ್‌ಗಳಿದ್ದರೆ ಕಳುಹಿಸುವಂತೆ ಮೆಸೇಜ್‌ ಕಳುಹಿಸಿದ್ದಾರೆ. ಈ ಬಗ್ಗೆ ಅನುಮಾನಗೊಂಡ ನಾಗೇಶ್‌ ಅವರು ತುಷಾರ್‌ ಗಿರಿನಾಥ್‌ ಅವರಿಗೆ ಮಾಹಿತಿ ನೀಡಿದ್ದಾರೆ.

ಕೂಡಲೇ ಎಚ್ಚೆತ್ತುಕೊಂಡ ತುಷಾರ್‌ ಗಿರಿನಾಥ್‌ ಅವರು ಮೊದಲಿಗೆ ಸಿಐಡಿ ಸೈಬರ್‌ ಸೆಲ್‌ಗೆ ದೂರು ದಾಖಲಿಸಿದರು. ಅನಂತರ ತಮ್ಮ ಟ್ವಿಟರ್‌ ಖಾತೆ ಮೂಲಕ ವಂಚನೆ  ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next