Advertisement

Kasaragod: ಕೊಲೆ ಯತ್ನ; 15ವರ್ಷ ಕಠಿನ ಸಜೆ

10:33 PM Feb 29, 2024 | Team Udayavani |

ಕಾಸರಗೋಡು: ಮರಳು ತುಂಬಿಸಿಕೊಂಡು ಬಂದ ಪಿಕಪ್‌ ವ್ಯಾನ್‌ ಢಿಕ್ಕಿ ಹೊಡೆಸಿ ಎಸ್‌ಐಯನ್ನು ಕೊಲೆಗೈಯಲು ಯತ್ನಿಸಿದ ಪ್ರಕರಣದ ಆರೋಪಿಗೆ 15 ವರ್ಷ ಕಠಿಣ ಸಜೆ ಹಾಗೂ 25 ಸಾವಿರ ರೂ. ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.

Advertisement

ಬೇಕಲ ಪೊಲೀಸ್‌ ಠಾಣೆ ವ್ಯಾಪ್ತಿಯ ಅಬ್ದುಲ್‌ ಜಲೀಲ್‌(39)ಗೆ ಕಾಸರಗೋಡು ಅಡೀಶನಲ್‌ ಡಿಸ್ಟ್ರಿಕ್ಟ್ ಆ್ಯಂಡ್‌ ಸೆಶನ್ಸ್‌ ನ್ಯಾಯಾಲಯ (3) ಈ ಸಜೆ ವಿಧಿಸಿದೆ.

ದಂಡ ಪಾವತಿಸದಿದ್ದಲ್ಲಿ 15 ತಿಂಗಳು ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ.

2014 ಫೆಬ್ರವರಿ 7ರಂದು ಕಲ್ಲಿಂಗಲ್‌ನಲ್ಲಿ ಅಕ್ರಮ ಮರಳು ಸಾಗಾಟ ತಡೆಯಲು ಯತ್ನಿಸಿದಾಗ ಎಸ್‌ಐ ಆಗಿದ್ದ ಎಂ. ರಾಜೇಶ್‌ಗೆ ಪಿಕಪ್‌ ಢಿಕ್ಕಿ ಹೊಡೆಸಿ ಕೊಲೆಗೈಯಲು ಯತ್ನಿಸಿರುವ ಕುರಿತು ಬೇಕಲ ಪೊಲೀಸರು ಕೇಸು ದಾಖಲಿಸಿಕೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next