Advertisement

Kasaragod ಸುದ್ದಿಗಾರರಿಗೆ ಹಲ್ಲೆ: ಕೇಸು ದಾಖಲು

01:09 AM Apr 28, 2024 | Team Udayavani |

ಕಾಸರಗೋಡು: ಚೆರ್ಕಳ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ ಮತದಾನ ಸಂದರ್ಭದಲ್ಲಿ ಸುದ್ದಿ ಸಂಗ್ರಹಿಸಲು ತೆರಳಿದ್ದ ಸುದ್ದಿ ಚಾನೆಲ್‌ನ ಬ್ಯೂರೋ ಸಜಿ ಕಣ್ಣನ್‌ ಮತ್ತು ಕೆಮರಾಮೆನ್‌ ಕೆ.ಕೆ.ಶೈಜು ಪಿಲಾತ್ತರ ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ 10 ಮಂದಿ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ.

Advertisement

ವರದಿಗಾರರಾದ ಸಾರಂಗ್‌ ಹಾಗೂ ಪ್ರದೀಪ್‌ ಕುಮಾರ್‌ ಅವರಿಗೂ ಹಲ್ಲೆ ಮಾಡಲಾಗಿತ್ತು. ಈ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಹಲ್ಲೆ ಪ್ರಕರಣವನ್ನು ಪತ್ರಕರ್ತರ ಯೂನಿಯನ್‌ ಖಂಡಿಸಿದ್ದು, ಕಾನೂನು ಕ್ರಮ ತೆಗೆದುಕೊಳ್ಳುವಂತೆ ಆಗ್ರಹಿಸಿದೆ.

ಬೂತ್‌ ಏಜೆಂಟ್‌ಗೆ ಹಲ್ಲೆ : ಕೇಸು ದಾಖಲು
ಕಾಸರಗೋಡು: ಚೆಂಗಳ ಇಸ್ರತುಲ್‌ ಇಸ್ಲಾಂ ಎಲ್‌ಪಿ ಶಾಲೆಯ ಮತಗಟ್ಟೆಯಲ್ಲಿ ಸಿಪಿಎಂ ಏಜೆಂಟ್‌ ಅಬೂಬಕರ್‌ ಹಾಶಿ ಸಿ.ಎಂ. (38) ಅವರಿಗೆ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ತಂಡವೊಂದರ ವಿರುದ್ಧ ವಿದ್ಯಾನಗರ ಪೊಲೀಸರು ಕೇಸು ದಾಖಲಿಸಿದ್ದಾರೆ. ರಾಜಕೀಯ ದ್ವೇಷದಿಂದ ಹಲ್ಲೆ ಮಾಡಿದ್ದಾಗಿ ಪೊಲೀಸರಿಗೆ ದೂರು ನೀಡಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next