Advertisement

ಕೊಲೆ ಯತ್ನ: ನಾಲ್ವರು ಆರೋಪಿಗಳ ಬಂಧನ

01:12 AM May 15, 2019 | Team Udayavani |

ಬೆಂಗಳೂರು: ಕ್ರಿಕೆಟ್‌ ಆಡುವಾಗ ನಡೆದ ಗಲಾಟೆ ಹಿನ್ನೆಲೆಯಲ್ಲಿ ಮಾರಕಾಸ್ತ್ರಗಳಿಂದ ಗಂಭೀರವಾಗಿ ಹಲ್ಲೆ ನಡೆಸಿದ್ದ ನಾಲ್ವರು ಆರೋಪಿಗಳನ್ನು ಬಸವೇಶ್ವರನಗರ ಪೊಲೀಸರು ಬಂಧಿಸಿದ್ದಾರೆ.

Advertisement

ಸುಬ್ರಹ್ಮಣ್ಯನಗರದ ಮಂಜುನಾಥ (27), ಗಾಯತ್ರಿನಗರದ ವಿನೋದ್‌ (28), ಮನೋಜ್‌ ಕುಮಾರ್‌(19) ಮತ್ತು ರಾಕೇಶ್‌ (19) ಬಂಧಿತರು. ಆರೋಪಿಗಳು ಏ.24ರಂದು ಮಂಜುನಾಥನಗರದ ಜೆ.ಸಿ.ಬೇಕರಿ ಸಮೀಪದ ಭರತ್‌ ಕುಮಾರ್‌ ಎಂಬಾತನ ಮೇಲೆ ಮಾರಕಾಸðಗಳಿಂದ ಹಲ್ಲೆ ನಡೆಸಿದ್ದರು ಎಂದು ಪೊಲೀಸರು ಹೇಳಿದರು.

ಸಂಜಯ್‌ನಗರದ ಮೈದಾನದಲ್ಲಿ ಕ್ರಿಕೆಟ್‌ ಆಡುವಾಗ ಭರತ್‌ಕುಮಾರ್‌ ಹಾಗೂ ಸ್ನೇಹಿತರ ಜತೆ ಆರೋಪಿಗಳು ವಾಗ್ವಾದ ನಡೆಸಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದರು. ಇದೇ ದ್ವೇಷದ ಹಿನ್ನೆಲೆಯಲ್ಲಿ ಏ.24ರಂದು ತಡರಾತ್ರಿ 12.30ರ ಸುಮಾರಿಗೆ ಮಂಜುನಾಥನಗರದ ಜೆ.ಸಿ.ಬೇಕರಿ ಬಳಿ ಬೈಕ್‌ನಲ್ಲಿ ಬಂದ ಆರೋಪಿಗಳು,

ಸ್ನೇಹಿತರಾದ ಪ್ರಮೋದ್‌ ಹಾಗೂ ಮಹೇಂದ್ರ ಜತೆ ಮಾತನಾಡುತ್ತಾ ನಿಂತಿದ್ದ ಭರತ್‌ಕುಮಾರ್‌ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು. ಪರಿಣಾಮ ಭರತ್‌ ಕುಮಾರ್‌ ಕೈ ಮತ್ತು ಎದೆಗೆ ಗಂಭೀರ ಗಾಯವಾಗಿತ್ತು. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next