Advertisement

Mob rule;ದೇಶದಲ್ಲಿ’ಮಾಬ್‌ ರೂಲ್‌’ ಸೃಷ್ಟಿಸಲು ಯತ್ನ: ನ್ಯಾ| ಅಭಯ್‌ ಓಕಾ ಕಿಡಿ

01:40 AM Sep 02, 2024 | Team Udayavani |

ಪುಣೆ: ದೋಷಿಗಳಿಗೆ ಗಲ್ಲು ಶಿಕ್ಷೆ ಕೊಡಿಸುವ ಭರವಸೆ ನೀಡುವ ಮೂಲಕ ರಾಜಕಾರಣಿಗಳು ದೇಶದಲ್ಲಿ “ಮಾಬ್‌ ರೂಲ್‌’ (ಹೆಚ್ಚು ಜನರು ಬಯಸುವ ಕಾನೂನು)ಗಳನ್ನು ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಸು. ಕೋರ್ಟ್‌ ನ್ಯಾಯಮೂರ್ತಿ ಅಭಯ್‌ ಓಕಾ ಅವರು ಕಿಡಿಕಾರಿದ್ದಾರೆ.

Advertisement

ಪುಣೆಯಲ್ಲಿ ಬಾರ್‌ ಕೌನ್ಸಿಲ್‌ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಬ್‌ ರೂಲ್‌ಗ‌ಳಿಂದ ಜನರಿಗೆ ನ್ಯಾಯಾಂಗದ ಮೇಲಿನ ನಂಬಿಕೆ ಕಡಿಮೆಯಾಗುತ್ತದೆ. ನ್ಯಾಯಾಂಗವನ್ನು ಗೌರವಿಸುವುದಾದರೆ, ಅದಕ್ಕೆ ಸ್ವತಂತ್ರವಾಗಿ ಕೆಲಸ ಮಾಡಲು ಬಿಡಬೇಕು. ವಕೀಲರು ಹಾಗೂ ಕೋರ್ಟ್‌ ಸಂವೇದನಶೀಲವಾಗಿ ನಡೆದು­ಕೊಳ್ಳಬೇಕು. ಆದರೆ ರಾಜಕಾರಣಿಗಳು ಗಲ್ಲುಶಿಕ್ಷೆಯ ಕಾನೂನನ್ನು ರಚಿಸುವ ಮೂಲಕ ಜನಸಮೂಹದ ಬಯಕೆ ಈಡೇರಿಸಲು ತೊಡಗಿದ್ದಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next