Advertisement

ಆತ್ಮಹತ್ಯೆಗೆ ಯತ್ನ; 6 ತಿಂಗಳು ನರಳಾಡಿ ಯುವತಿ ಸಾವು 

12:25 PM Jan 03, 2018 | |

ಮೈಸೂರು: ಕಾಮುಕನೊಬ್ಬನ ಕಿರುಕುಳ ತಾಳಲಾರದೆ ನೇಣಿಗೆ ಕೊರಳೊಡ್ಡಿ ಕೋಮಾಗೆ ಜಾರಿ 6 ತಿಂಗಳ ಬಳಿಕ ಯುವತಿಯೊಬ್ಬಳು ಸಾವನ್ನಪ್ಪಿದ ದಾರುಣ ಘಟನೆ ಬುಧವಾರ ನಡೆದಿದೆ. 

Advertisement

ರಮ್ಮಹಳ್ಳಿ ನಿವಾಸಿಯಾಗಿದ್ದ ರಜನಿ ಎಂಬಾಕೆ 6 ತಿಂಗಳ ಹಿಂದೆ ನೇಣು ಬಿಗಿದುಕೊಂಡ ವೇಳೆ ರಕ್ಷಣೆಗೊಳಗಾಗಿ  ಕೆ.ಆರ್‌. ಆಸ್ಪತ್ರೆಗೆ ದಾಖಲಾಗಿದ್ದಳು. ಚಿಕಿತ್ಸೆ ಫ‌ಲಕಾರಿಯಾಗದೆ ಕೊನೆಯುಸಿರೆಳೆದಿದ್ದಾಳೆ. 

ರಘು ಎಂಬಾತ ರಜನಿಯ ಬೆನ್ನು ಬಿದ್ದಿದ್ದು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆಕೆ ಪ್ರೀತಿ ನಿರಾಕರಿಸಿದ್ದು, ಮನೆಯವರೂ ಆತನಿಗೆ ವಿರೋಧ ತೋರಿದ್ದರು.  ನಿರಂತರ ಕಿರುಕುಳ ನೀಡಿ  ಹಿಂಬಾಲಿಸಿ ಫೋಟೋಗಳನ್ನು ತೆಗೆದು ವಾಟ್ಸಾಪ್‌ಗೆ ಹಾಕುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ.  ತೀವ್ರ ವಾಗಿ ನೊಂದು ರಜನಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಮನೆಯವರು ತಿಳಿಸಿದ್ದಾರೆ. 

ಇದೀಗ ರಜನಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ರಘು ವನ್ನು ಬಂಧಿಸಿ ಶಿಕ್ಷಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ಮೈಸೂರು ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next