Advertisement

ಲಿಂಬಾವಳಿ ಕಚೇರಿಯ ಮೇಲೆ ದಾಳಿ ; ರಾಯಚೂರಿನಲ್ಲಿ 5 ಲಕ್ಷ ರೂ ಜಪ್ತಿ 

03:18 PM Apr 01, 2018 | Team Udayavani |

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಆಮಿಷ ನೀಡುವ ಯತ್ನಗಳನ್ನು ರಾಜಕಾರಣಿಗಳು ಮುಂದುವರಿಸಿದ್ದು ಭಾನುವಾರ ರಾಜ್ಯಾದ್ಯಂತ ಹಣ , ಸೀರೆ ಸೇರಿದಂತೆ ಅಪಾರ ಪ್ರಮಾಣದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. 

Advertisement

ಲಗ್ಗೆರೆಯಲ್ಲಿ ಆರ್‌.ಆರ್‌.ನಗರ ಕಾಂಗ್ರೆಸ್‌ ಅಭ್ಯರ್ಥಿ, ಶಾಸಕ ಮುನಿರತ್ನ ಅವರ ಭಾವಚಿತ್ರವಿದ್ದ ಸೀರೆ ಬಂಡಲ್‌ಗ‌ಳು ಸಹಿತ ವಿವಿಧ ವಸ್ತುಗಳನ್ನು 5 ಕಡೆಗಳಲ್ಲಿ ಜಪ್ತಿ ಮಾಡಲಾಗಿದೆ. 

ಬೆಂಗಳೂರಿನ ತಿಮ್ಮ ಸಂದ್ರ ದಲ್ಲಿರುವ ಮಹದೇವಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ  ಅರವಿಂದ ಲಿಂಬಾವಳಿ ಅವರ ಕಚೇರಿಯ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್‌ ಬಕೆಟ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ  ಎಫ್ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ. 

ಕಾಂಗ್ರೆಸ್‌ ಪಕ್ಷ ದ ಅಭ್ಯರ್ಥಿಯೊಬ್ಬರು ಹಂಚಲು ಮುಂದಾಗಿದ್ದ ಹೊಲಿಗೆ ಯಂತ್ರಗಳನ್ನು ಜಪ್ತಿ ಮಾಡಿರುವ ಬಗ್ಗೆ ವರದಿಯಾಗಿದೆ. 

ರಾಯಚೂರಿನಲ್ಲಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ 5 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ. ಯರಗೇರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಿಂಗನೋಡಿ ಚೆಕ್‌ ಪೋಸ್ಟ್‌ ಬಳಿ ಹಣ ಸಾಗಿಸುತ್ತಿದ್ದ ಕಾರು ಮತ್ತು 5 ಲಕ್ಷ ರೂಪಾಯಿಯನ್ನು ವಶಕ್ಕೆ ಪಡೆದಿದ್ದಾರೆ. 

Advertisement

ಬೆಳಗಾವಿಯ ರಾಮದುರ್ಗದ ಹುಲಕುಂದ ದಲ್ಲಿ  ಸುಮಾರು 2 ಸಾವಿರ ಸೀರೆಗಳ ಸಮೇತ ಇಬ್ಬರನ್ನು ಕಟಕೋಳ ಠಾಣೆಯ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜೆಡಿಎಸ್‌ ಟಿಕೆಟ್‌ ಆಕಾಂಕ್ಷಿ  ಎಂ.ಜಾವೀದ್‌ ಅವರು ಹಂಚಲು ಮುಂದಾಗಿದ್ದರು ಎಂದು ತಿಳಿದು ಬಂದಿದೆ. 

Advertisement

Udayavani is now on Telegram. Click here to join our channel and stay updated with the latest news.

Next