Advertisement

ಕೇಜ್ರಿ ಮೇಲೆ ದಾಳಿ: ನ.26ರಂದು ದಿಲ್ಲಿ ಅಸೆಂಬ್ಲಿ ವಿಶೇಷ ಅಧಿವೇಶನ

07:25 PM Nov 22, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಮೇಲೆ ಖಾರ ಪುಡಿ ಎಸೆದು ದಾಳಿ ನಡೆಸಲಾದ ಪ್ರಕರಣವನ್ನು ಚರ್ಚಿಸಲು ದಿಲ್ಲಿ ವಿಧಾನ ಸಭೆಯ ವಿಶೇಷ ಅಧಿವೇಶನವನ್ನು ಆಮ್‌ ಆದ್ಮಿ ಪಕ್ಷದ ಸರಕಾರ ನ.26ಕ್ಕೆ ಕರೆದಿದೆ. 

Advertisement

ಮುಂದಿನ ಸೋಮವಾರ ನಡೆಯಲಿರುವ ಈ ವಿಶೇಷ ಅಧಿವೇಶನದಲ್ಲಿ ಮುಖ್ಯಮಂತ್ರಿ ಮೇಲಿನ ಖಾರ ಪುಡಿ ದಾಳಿ, ದಿಲ್ಲಿ ಪೊಲೀಸರ ನಿಲುವು ಮಾತ್ರವಲ್ಲದೆ ದಿಲ್ಲಿ ಮತದಾರರ ಪಟ್ಟಿಯಿಂದ ಬಿಜೆಪಿ, ಚುನಾವಣಾ ಆಯೋಗದ ಜತೆಗೂಡಿ 30 ಲಕ್ಷ  ಮತದಾರರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಿರುವ ಕ್ರಮವನ್ನು ಕೂಡ ಚರ್ಚಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಮನೀಶ್‌ ಸಿಸೋಡಿಯ ಹೇಳಿರುವುದನ್ನು ಉಲ್ಲೇಖೀಸಿ ಎಎನ್‌ಐ ವರದಿ ಮಾಡಿದೆ. 

Advertisement

Udayavani is now on Telegram. Click here to join our channel and stay updated with the latest news.

Next