Advertisement

ಹಾಸ್ಟೆಲ್‌ ಗೆ ನುಗ್ಗಿ ಪುಂಡರ ಗ್ಯಾಂಗ್ ದಾಂಧಲೆ 

03:10 PM Jul 06, 2023 | Team Udayavani |

ಆಲೂರು: ಪುಂಡರ ಗುಂಪೊಂದು ಏಕಾಏಕಿ ಹಾಸ್ಟೆಲ್‌ಗೆ ನುಗ್ಗಿ ಹಾಸ್ಟೆಲ್‌ ನಲ್ಲಿದ್ದ ಪರಿಕರಗಳನ್ನು ಮುರಿದು ಹಾಕಿ, ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಆಲೂರು ಪಟ್ಟಣದಲ್ಲಿ ನಡೆದಿದೆ.

Advertisement

ಮಂಗಳವಾರ ಸಂಜೆ 5.30ಕ್ಕೆ ಪಟ್ಟಣದ ಕೊನೆ ಪೇಟೆ ವೀರಶೈವ ಕಲ್ಯಾಣ ಮಂಟಪದ ಬಳಿಯಿರುವ ಸರ್ಕಾರಿ ಮೆಟ್ರಿಕ್‌ ನಂತರದ ಬಾಲಕರ ವಸತಿ ನಿಲಯಕ್ಕೆ ಅಂಬೇಡ್ಕರ್‌ ನಗರದ ಸಂಜು, ಅರ್ಜುನ್‌, ಸಂಜಯ್ ಸಚಿನ್‌, ರೂಪೇಶ್‌ ಸೇರಿ ಐವರ ಪುಂಡರ ಗುಂಪು ಕೈಯಲ್ಲಿ ಕ್ರಿಕೆಟ್‌ ಬ್ಯಾಟ್ ವಿಕೆಟ್‌ ಹಿಡಿದು ಏಕಾಏಕಿ ಹಾಸ್ಟೆಲ್‌ಗೆ ನುಗ್ಗಿ ಹಾಸ್ಟೆಲ್‌ನಲ್ಲಿದ್ದ ಚೇರ್‌, ಟೇಬಲ್‌ ಮುರಿದು ಹಾಕಿದ್ದಾರೆ.

ಕೆಲ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ ಬೆದರಿಕೆ ಹಾಕಿದ್ದಾರೆ. ಗಾಯಾಳು ವಿದ್ಯಾರ್ಥಿಗಳಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೋಡಿಸಿ¨ªಾರೆ. ಈ ಸಂಬಂಧ ಹಾಸ್ಟೆಲ್‌ ವಾರ್ಡನ್‌ ಆನಂದ ಆಲೂರು ಠಾಣೆಗೆ ದೂರು ನೀಡಿದ್ದಾರೆ. ತಕ್ಷಣ ವೃತ್ತ ನಿರೀಕ್ಷಕರು ಹಾಸ್ಟೆಲ್‌ಗೆ ಬೇಟಿ ನೀಡಿ ಸಿ.ಸಿ.ಟೀವಿ ಪರಿಶೀಲಿಸಿದ್ದಾ ರೆ. ಹಲ್ಲೆಗೆ ಕಾರಣರಾದ ಪುಂಡರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಹಾಸ್ಟೆಲ್‌ ಘಟನೆಗೂ ಮುನ್ನಾ ಆಲೂರು ಬಸ್‌ ಸ್ಟ್ಯಾಂಡ್‌ನ‌ಲ್ಲಿ ಹುಡುಗರ ಜೊತೆ ಗಲಾಟೆ ಮಾಡಿಕೊಂಡಿದ್ದರು ಎಂದು ತಿಳಿದು ಬಂದಿದೆ. ಕೆಲವು ಪುಂಡ ಯುವಕರು ಬಸ್‌ ನಿಲ್ದಾಣ ಸೇರಿ ಸಾರ್ವಜನಿಕ ಸ್ಥಳಗಳಲ್ಲಿ ಸಣ್ಣಪುಟ್ಟ ಗಲಾಟೆ ಮಾಡುತ್ತಾ ಜನರಲ್ಲಿ ಭಯ ಹುಟ್ಟಿಸಿ ಹವಾ ಮೇಂಟೈನ್‌  ಮಾಡುತ್ತಿದ್ದಾರೆ. ಇಂತಹವರ ಬಗ್ಗೆ ಹದ್ದಿನ ಕಣ್ಣು ಹಿಡುವಂತೆ ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸರ್ಕಲ್‌ ಇನ್ಸೆ$³ಕ್ಟರ್‌ ಗಂಗಾಧರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next