Advertisement

ಆತ್ರಾಡಿ, ಹಿರಿಯಡ್ಕ ಭಾಗದ ರಸ್ತೆ, ಚರಂಡಿ ಕೆಲಸ ಬಾಕಿ: ಸಾರ್ವಜನಿಕರಿಂದ ಆರೋಪ

11:23 PM Jun 07, 2020 | Sriram |

ಉಡುಪಿ: ಅತ್ರಾಡಿಯಿಂದ ಹಿರಿಯಡ್ಕದವರೆಗಿನ ಕೆಲವು ಭಾಗದಲ್ಲಿ ರಸ್ತೆ ಡಾಮರೀಕರಣವನ್ನು ಮಾರ್ಚ್‌ ನಲ್ಲಿ ಮಾಡಲಾಗಿತ್ತು. ಆದರೆ ಅಕ್ಕಪಕ್ಕದ ತೋಡುಗಳ ಕೆಲಸ ಮಾತ್ರ ಆಗದೆ ಹಾಗೇ ಉಳಿದಿದೆ ಎಂದು ಸ್ಥಳೀಯರು ದೂರಿದ್ದಾರೆ.

Advertisement

ಪೊದೆ, ಗಿಡಗಳಿಂದ ಆವೃತ
ಅತ್ರಾಡಿ, ಹಿರಿಯಡ್ಕ ಭಾಗದ ಸೇಡಿಗುಡ್ಡೆ, ಓಂತಿಬೆಟ್ಟು, ಹಿರಿಯಡ್ಕ ಶ್ರೀ ದುರ್ಗಾ ಕಲ್ಯಾಣ ಮಂಟಪ ಮೊದಲಾದ ಭಾಗದಲ್ಲಿ ಚರಂಡಿಗಳು ಮಣ್ಣು, ಪೊದೆ, ಗಿಡಗಂಟಿಗಳಿಂದ ಆವೃತವಾಗಿವೆೆ. ಇದರಿಂದ ಮುಂದೆ ಮಳೆ ಶುರುವಾದರೆ ನೀರು ರಸ್ತೆಯಲ್ಲೇ ಹರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಗೇ ಕೆಲವು ಕಡೆ ನೆಲ ಮತ್ತು ಡಾಮರು ರಸ್ತೆ ನಡುವೆ 1 ಅಡಿಯಷ್ಟು ಅಂತರದಲ್ಲಿ ಏರಿಳಿತದಿಂದ ಕೂಡಿದೆ. ಇದನ್ನು ಮಣ್ಣು ತುಂಬಿ ಸಮತಟ್ಟು ಮಾಡದಿದ್ದರೆ ಡಾಮರು ಕಿತ್ತು ಹೋಗುವ ಸಾಧ್ಯತೆಯೂ ಇದೆ ಎಂದು ಸ್ಥಳೀಯರು ಕಳವಳ ವ್ಯಕ್ತಪಡಿಸಿದ್ದಾರೆ.

ಪರಿಶೀಲಿಸುತ್ತೇವೆ
ಲಾಕ್‌ಡೌನ್‌ ಹಾಗೂ ಕಾರ್ಮಿಕರ ಸಮಸ್ಯೆಯಿಂದ ಅನೇಕ ಕೆಲಸ ಕಾರ್ಯಗಳು ಸ್ಥಗಿತವಾಗಿತ್ತು. ಸಂಬಂಧಪಟ್ಟ ಅಧಿಕಾರಿಗಳಿಗೆ ಸಮಸ್ಯೆಯ ಬಗ್ಗೆ ತಿಳಿಸಲಾಗಿದೆ. ಮತ್ತೂಮ್ಮೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುತ್ತೇವೆ
– ಲಾಲಾಜಿ
ಆರ್‌. ಮೆಂಡನ್‌, ಶಾಸಕ, ಕಾಪು

 

Advertisement

Udayavani is now on Telegram. Click here to join our channel and stay updated with the latest news.

Next