Advertisement

ಅಥಣಿ ಶಿವಯೋಗಿಗಳು ಅಧ್ಯಾತ್ಮ ಕ್ಷೇತ್ರದ ಮೇರು ಪರ್ವತ

12:38 PM Jun 26, 2017 | |

ದಾವಣಗೆರೆ: ಬಸವಾದಿ ಶರಣರ ತತ್ವಗಳನ್ನ ಆಚರಿಸಿ, ತೋರಿಸಿದ ಅಥಣಿ ಶಿವಯೋಗಿಗಳು ಆಧ್ಯಾತ್ಮ ಕ್ಷೇತ್ರದ ಮೇರು ಪರ್ವತ ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಬಣ್ಣಿಸಿದ್ದಾರೆ. ಭಾನುವಾರ ಶ್ರೀ ಶಿವಯೋಗಿ ಮಂದಿರದಲ್ಲಿ ಲಿ| ಶ್ರೀ ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳವರ 182ನೇ ಜಯಂತಿ, ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪ್ರತಿಭಾವಂತ ವಿದ್ಯಾರ್ಥಿಗಳ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

Advertisement

ಅಥಣಿ ಶಿವಯೋಗಿಗಳು ಪ್ರತಿಯೊಬ್ಬರಲ್ಲೂ ದೇವರನ್ನ ಕಂಡವರು. ಅಥಣಿ ಮಠವನ್ನು ಕಾಯಕ-ದಾಸೋಹ- ಸಮಾನತೆಯ ಮಠವನ್ನಾಗಿ ಪರಿವರ್ತಿಸಿದ ಮಹಾನ್‌ ಪರಿವರ್ತನೆಯ ಹರಿಕಾರರು ಎಂದು ತಿಳಿಸಿದರು. ಅಥಣಿ ಮುರುಘೇಂದ್ರ ಮಹಾಶಿವಯೋಗಿಗಳು ಪ್ರತಿ ದಿನ ಶಿವಯೋಗ ಮಾಡುವ ಮೂಲಕ ಮಹಾನ್‌ ಶಿವಯೋಗಿಗಳಾದವರು. ಅವರಲ್ಲಿ ಬೇಡಿ ಬಂದವರ ಸಮಸ್ಯೆಗೆ ಪರಿಹಾರ ನೀಡಿದವರು.

ಅಂತವರು ಸಾಗಿ ಬಂದ ಶಿವಯೋಗದ ಹಾದಿಯಲ್ಲಿ ಮುನ್ನಡೆದರೆ ಮನಸ್ಸಿಗೆ ಶಾಂತಿ ದೊರಕುತ್ತದೆ. ವಿಶೇಷವಾಗಿ ಏಕಾಗ್ರತೆ ಲಭಿಸುತ್ತದೆ ಎಂದು ತಿಳಿಸಿದರು. ಪ್ರತಿಭೆ ಎನ್ನುವುದು ಸಾಧಕರ ಸ್ವತ್ತು. ಪ್ರತಿಯೊಬ್ಬರೂ ಪ್ರತಿಭಾವಂತರು. ಅದನ್ನು ನಾವೇ ಗುರುತಿಸಿಕೊಂಡು ನಮಗೆ ಆಸಕ್ತಿ ಇರುವ ಕಡೆ ಅಧ್ಯಯನದಲ್ಲಿ ತೊಡಗುವ ಮೂಲಕ ಬೆಳೆಯಬೇಕು.

ದರಿದ್ರತನ ದೂರ ಮಾಡಿ ಸತತ ಅಧ್ಯಯನ ನಡೆಸುವುದರಿಂದ ಜೀವನದ ಗುರಿ ತಲುಪಬಹುದು ಎನ್ನುವುದಕ್ಕೆ ಕೆಎಎಸ್‌ನಲ್ಲಿ 7ನೇ ರ್‍ಯಾಂಕ್‌ ಪಡೆದಿರುವ ಪ್ರಿಯದರ್ಶಿನಿ ಸಾಣಿಕೊಪ್ಪಅವರೇ ಸಾಕ್ಷಿ. ಎಲ್ಲಾ ಮಕ್ಕಳು ಉನ್ನತ ಸಾಧನೆ ಮಾಡಲಿಕ್ಕೆ ಸಾಧ್ಯ ಎಂದು ತಿಳಿಸಿದರು. ವಿಧಾನ ಪರಿಷತ್‌ ಸದಸ್ಯ ಕೆ. ಅಬ್ದುಲ್‌ ಜಬ್ಟಾರ್‌ ಮಾತನಾಡಿ, ಡಾ| ಶಿವಮೂರ್ತಿ ಮುರುಘಾ  ಶರಣರು ಪ್ರಗತಿಪರ ಚಿಂತನೆಯವರು ನುಡಿದಂತೆನಡೆಯುತ್ತಿರುವರು.

ಇಂದಿನ ವಾತಾವರಣದಲ್ಲಿ ವಿದ್ಯಾರ್ಥಿ ನಿಯರು ಚೆನ್ನಾಗಿ ಓದುತ್ತಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು. ದೇಶದಲ್ಲಿ ವೃದ್ಧಾಶ್ರಮಗಳ ಸಂಖ್ಯೆ ಹೆಚ್ಚಾಗುತ್ತಿರುವುದು ನಿಜಕ್ಕೂ ದುಖಃಕರ ವಿಚಾರ. ಒಂದರ್ಥದಲ್ಲಿ ಮಹಿಳೆಯರು ಕಾರಣವಾಗುತ್ತಿದ್ದಾರೆ. ಸೊಸೆ ಅತ್ತೆ-ಮಾವನನ್ನು ತಂದೆ-ತಾಯಿ ಎಂದು ಭಾವಿಸದೇ ಇರುವುದು. ಅತ್ತೆ-ಮಾವ ಸೊಸೆಯನ್ನು ಮಗಳಂತೆ ನೋಡಿಕೊಳ್ಳದೇ ಇರುವಂತಹ ಭಾವನೆಯಿಂದ ಸಾಕಷ್ಟು ಜಗಳ ಆಗುತ್ತಿವೆ.

Advertisement

ತಂದೆ-ತಾಯಂದಿರು ಹೆಣ್ಣು ಮಕ್ಕಳಿಗೆ ಒಳ್ಳೆಯ ಸಂಸ್ಕಾರ, ಸಂಸ್ಕೃತಿ, ಹಿರಿಯರ ಬಗ್ಗೆ ಗೌರವ ಭಾವನೆ ಬೆಳೆಸಬೇಕು ಎಂದು ತಿಳಿಸಿದರು. ಸನ್ಮಾನ ಸೀÌಕರಿಸಿದ 2014ನೇ ಸಾಲಿನ 7ನೇ ರ್‍ಯಾಂಕ್‌ ವಿಜೇತ ಪ್ರಿಯದರ್ಶಿನಿ ಸಾಣಿಕೊಪ್ಪ ಮಾತನಾಡಿ, ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಪಡೆಯುತ್ತಿರುವ 42ನೇ ಸನ್ಮಾನ ತಮಗೆ ತುಂಬಾ ಖುಷಿ ತಂದಿದೆ. ನಾನು 9ನೇ ತರಗತಿಯಿಂದಲೇ ಶಿವಯೋಗದಲ್ಲಿ ತೊಡಗಿಸಿಕೊಂಡಿದ್ದರಿಂದ ಇಷ್ಟೆಲ್ಲಾ ಸಾಧನೆಗೆ ಕಾರಣವಾಯಿತು.

ಶಿವಯೋಗ ಎನ್ನುವುದು ಯಾವುದೇ ಜಾತಿ, ಧರ್ಮಕ್ಕೆ ಸಂಬಂಧಪಟ್ಟಿದ್ದಲ್ಲ. ಅದೊಂದು ವೈಜ್ಞಾನಿಕ ಮಾರ್ಗ. ಪ್ರತಿ ದಿನ ಶಿವಯೋಗ ಮಾಡಿದ್ದರ ಫಲವಾಗಿಯೇ ದಿನಕ್ಕೆ 16-18 ಗಂಟೆ ನಿರಂತರವಾಗಿ ಓದಲಿಕ್ಕೆ ಸಾಧ್ಯವಾಯಿತು. ತಮ್ಮ ಸಾಧನೆಗೆ ಬಸವತತ್ವವೇ ಕಾರಣ ಎಂದು ತಿಳಿಸಿದರು. 

ಇಂಜಿನಿಯರ್‌, ಡಾಕ್ಟರ್‌, ಐಎಎಸ್‌, ಐಪಿಎಸ್‌, ಕೆಎಎಸ್‌ ಅಧಿಕಾರಿ ಏನೇ ಆಗಿರಲಿ ಮೊದಲು ಮಾನವೀಯತೆಯುಳ್ಳವರಾಗಿರಬೇಕು. 2016ರ ಸಮೀಕ್ಷೆ ಪ್ರಕಾರ ದೇಶದಲ್ಲಿ 68 ಸಾವಿರ ವೃದ್ಧಾಶ್ರಮ ಇವೆ. ಅವುಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇರುವಂತಹವರು ಉನ್ನತ ಹುದ್ದೆ, ಅಧಿಕಾರದಲ್ಲಿದ್ದಂತಹವರ ತಂದೆ-ತಾಯಿ ಎಂಬುದು ನಿಜಕ್ಕೂ ಆತಂಕ ಪಡಬೇಕಾದ ವಿಚಾರ. ಏನೇ ಆಗಲಿ ಮಾನವೀಯತೆ ಮರೆಯಬಾರದು ಎಂದರು.

ಶ್ರೀ ಹಾಲಸ್ವಾಮಿ, ಶ್ರೀ ಬಸವ ಕೇತೇಶ್ವರ ಸ್ವಾಮೀಜಿ, ಡಾ| ಜಿ.ಸಿ. ಬಸವರಾಜ್‌, ಪಲ್ಲಾಗಟ್ಟೆ ಕೊಟ್ರೇಶ್‌, ಜೆ. ಸೋಮನಾಥ್‌ ಇತರರು ಇದ್ದರು. ಬಸವ ಕಲಾ ಲೋಕದ ಕಲಾವಿದರು ಪ್ರಾರ್ಥಿಸಿದರು. ದಮಯಂತಿಗೌಡ ಸ್ವಾಗತಿಸಿದರು. ಶಿವಕುಮಾರ್‌ ನಿರೂಪಿಸಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next