Advertisement

ಅಟಲ್‌ ಆದರ್ಶ-ಸಿದ್ದಾಂತ ಪಾಲಿಸಿ: ಶಾಸಕ ನರಿಬೋಳ

11:11 AM Dec 26, 2021 | Team Udayavani |

ಜೇವರ್ಗಿ: ದೂರದರ್ಶಿತ್ವ ಹೊಂದಿದ್ದ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ಅವರ ಆದರ್ಶ, ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

Advertisement

ಪಟ್ಟಣದ ಬಸವೇಶ್ವರ ವೃತ್ತದ ಬಳಿ ಇರುವ ಬಿಜೆಪಿ ಕಚೇರಿಯಲ್ಲಿ ಶನಿವಾರ ಅಟಲ್‌ ಬಿಹಾರಿ ವಾಜಪೇಯಿ ಜನ್ಮದಿನದ ಪ್ರಯುಕ್ತ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಇತರರಿಗೋಸ್ಕರ ಶ್ರಮಿಸಿದ ಮಹಾತ್ಮರ ಸಾಲಿನಲ್ಲಿ ಅಟಲ್‌ ಬಿಹಾರಿ ವಾಜಪೇಯಿ ಅಗ್ರಗಣ್ಯ ನಾಯಕರು. ಭಾರತದ ಸರ್ವಾಂಗೀಣ ಅಭಿವೃದ್ಧಿಗಾಗಿ ಅಟಲ್‌ ಸಾಕಷ್ಟು ಶ್ರಮಿಸಿದ್ದಾರೆ. ಅಟಲ್‌ ಕೇವಲ ಒಬ್ಬ ಉತ್ತಮ ರಾಜಕಾರಣಿ ಮಾತ್ರ ಆಗಿರಲಿಲ್ಲ, ಉತ್ತಮ ವಾಗ್ಮಿ ಹಾಗೂ ಕವಿಯಾಗಿದ್ದರು. ಕೊನೆ ಉಸಿರು ಇರುವ ವರೆಗೆ ದೇಶದ ಏಳಿಗೆ ಕಾಣುತ್ತಿದ್ದ ವಾಜಪೇಯಿ ನಾಯಕತ್ವದಲ್ಲಿ ದೇಶ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಕಂಡಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಬಸವರಾಜ ಪಾಟೀಲ ನರಿಬೋಳ, ಗ್ರಾಪಂ ಸದಸ್ಯ ಅಶೋಕ ಬಿರಾದಾರ ಗುಡೂರ, ಅಪ್ಪಾಜಿ ಗೌನಳ್ಳಿ, ಶರಣು ಕೋಳಕೂರ, ವೀರೇಶ ಪಾಟೀಲ ಹರನೂರ, ರಾಜು ತಳವಾರ, ಜಯಪ್ರಕಾಶ ಪಾಟೀಲ, ಚಂದ್ರು ಸೀರಿ, ವಿಶಾಲ ಭಂಕೂರ, ಕೇದಾರಲಿಂಗಯ್ಯ ಹಿರೇಮಠ, ಶರಣು ಪೂಜಾರಿ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next