Advertisement

ನ್ಯೂಇಂಡಿಯಾಕ್ಕೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು:ಸಿಎಂಗಳಿಗೆ ಮೋದಿ

02:51 PM Apr 23, 2017 | Team Udayavani |

ಹೊಸದಿಲ್ಲಿ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಇಂದು ಭಾನುವಾರ ರಾಷ್ಟ್ರಪತಿ ಭವನದಲ್ಲಿ ನೀತಿ ಆಯೋಗ ಆಡಳಿತ ಮಂಡಳಿಯ 3 ನೇ ಸಭೆ ನಡೆಯಿತು. 

Advertisement

ಸಭೆಯಲ್ಲಿ 30 ರಾಜ್ಯಗಳ ಮುಖ್ಯಮಂತ್ರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ,ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ್‌ ಪನಗರಿಯಾ ಅವರು ಮುಂದಿನ 15 ವರ್ಷಗಳಲ್ಲಿ ದೇಶದ ಅಭಿವೃದ್ಧಿಗಾಗಿ ಪ್ರಮುಖ ಅಂಶಗಳ ಮಾರ್ಗ ನಕ್ಷೆಯ ರೂಪು ರೇಷೆಯನ್ನು ಪ್ರತ್ತುತ ಪಡಿಸಿದರು. ಜಿಎಸ್‌ಟಿ ಕುರಿತಾಗಿನ ವರಿದಿ ಪ್ರಸ್ತುತಪಡಿಸಲಾಯಿತು. 

ಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ನ್ಯೂಇಂಡಿಯಾ ಪರಿಕಲ್ಪನೆ ಸಾಕಾರಗೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಮುಖ್ಯಮಂತ್ರಿಗಳು ಒಟ್ಟಾಗಿ ಶ್ರಮ ವಹಿಸಿಬೇಕಿದೆ ಎಂದರು. 

ಕೇಂದ್ರದ ವಿವಿಧ ಯೋಜನೆಗಳು, ಸ್ವಚ್ಛ ಭಾರತ,ಕೌಶಲ ಅಭಿವೃದ್ಧಿ  ಮತ್ತು ಡಿಜಿಟಲ್‌ ಪಾವತಿಗಳ ಕುರಿತಾಗಿ ಚರ್ಚೆ ನಡೆದಿರುವ ಬಗ್ಗೆ ವರದಿಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next