Advertisement

ನೆರವು ಕಡಿತ: ಕಲ್ಲಡ್ಕ ಶಾಲಾ ವಿದ್ಯಾರ್ಥಿಗಳಿಂದ ಪ್ರತಿಭಟನೆ

07:10 AM Aug 13, 2017 | Team Udayavani |

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ವಿದ್ಯಾರ್ಥಿಗಳಿಗೆ ಕಳೆದ ಹತ್ತು ವರ್ಷಗಳಿಂದ ಶ್ರೀ ಕ್ಷೇತ್ರ ಕೊಲ್ಲೂರಿನಿಂದ ದತ್ತು ಯೋಜನೆಯಡಿ ನೀಡುತ್ತಿದ್ದ ಅನ್ನದಾನದ ಅನುದಾನವನ್ನು ರಾಜ್ಯ ಸರಕಾರ ರದ್ದುಗೊಳಿಸಿರು ವುದನ್ನು ವಿರೋಧಿಸಿ ಶಾಲೆಯ ಮಕ್ಕಳು ಮತ್ತು ಹೆತ್ತವರು ಶುಕ್ರವಾರ ಬಿ.ಸಿ.ರೋಡಿನಲ್ಲಿ  ಪ್ರತಿಭಟನೆ ಮಾಡಿದರು.

Advertisement

ಮೂವರು ಪೋಷಕರು, ಹದಿನಾಲ್ಕು ವಿದ್ಯಾರ್ಥಿಗಳು ಮಾತನಾಡಿ, ಉಸ್ತುವಾರಿ ಸಚಿವರೇ ನಿಮ್ಮ ರಾಜಕೀಯ ದ್ವೇಷಕ್ಕಾಗಿ ನಮ್ಮ ಹೊಟ್ಟೆಯ ಹಸಿವಿಗೆ ನೀಡುವ ಅನ್ನದಾನಕ್ಕೆ ಯಾಕೆ ಅಡ್ಡಿಪಡಿಸಿದಿರಿ ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ಸರಕಾರ ಬಂದ ಅನಂತರವೂ ನಾಲ್ಕೂವರೆ ವರ್ಷ ನಿರಂತರ ಸಹಾಯ ದೊರೆತಿದೆ. ಜಿಲ್ಲೆಯಲ್ಲಿ ಕೆಲವು ಸಮಯದ ಹಿಂದೆ ನಡೆದ ಅಹಿತಕರ ಘಟನೆಯ ಬಳಿಕ ವಿದ್ಯಾಕೇಂದ್ರದ ವಿದ್ಯಾರ್ಥಿಗಳ ಅನ್ನದಾನಕ್ಕೆ ಕಲ್ಲು ಹಾಕಲಾಗಿದೆ ಎಂದು ಆರೋಪಿಸಿದರು.

ಸುಮಾರು ಮೂರು ಸಹಸ್ರಕ್ಕೂ ಅಧಿಕ ಸಂಖ್ಯೆಯಲ್ಲಿದ್ದ ವಿದ್ಯಾರ್ಥಿಗಳು ಮತ್ತು ಪೋಷಕರು 2 ಗಂಟೆಗಳಷ್ಟು ಕಾಲ ಪ್ರತಿಭಟನೆ ನಡೆಸಿದರು. ಬಟ್ಟಲು ಬಡಿದು ಪ್ರತಿಭಟನೆ ಪ್ರತಿಭಟನೆ ಸಂದರ್ಭ ಅನ್ನದ ಬಟ್ಟಲನ್ನು ಬಡಿದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ಸರಕಾರದ ಕ್ರಮಗಳನ್ನು ಖಂಡಿಸಿದರು. ಶಿಸ್ತು ಬದ್ದವಾಗಿ ವಿದ್ಯಾರ್ಥಿಗಳು, ಹೆತ್ತವರು ಸಾಲಿನಲ್ಲಿ ನಿಂತು ಪ್ರತಿಭಟನೆ ನಡೆಸಿ ದರು. ಪ್ರತಿಭಟನೆ ಸಂದರ್ಭ ಕುಳಿತು ಕೊಳ್ಳಲು ಹಾಕಿದ ಕಾಗದವನ್ನು ಅವರೇ ತೆಗೆದುಕೊಂಡು ಹೋಗಿ ಸ್ವಚ್ಚತೆಗೆ ಆದ್ಯತೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next