Advertisement

Assembly Session; ಮಂತ್ರಿಗಳ ಗೈರು: ಸ್ಪೀಕರ್‌ ಖಾದರ್‌ ಗರಂ

10:42 PM Feb 19, 2024 | Team Udayavani |

ಬೆಂಗಳೂರು: ಈ ಮಂತ್ರಿಗಳು ಎಲ್ಲಿ ಹೋಗುತ್ತಾರೆ ಮಾರ್ರೆ. ಸಚಿವರೇ ಸರಕಾರದ ಮರ್ಯಾದೆ ತೆಗೆಯುತ್ತಾರೆ ಎಂದು ಸ್ಪೀಕರ್‌ ಖಾದರ್‌ ಗರಂ ಆದ ಪ್ರಸಂಗ ನಡೆಯಿತು.

Advertisement

ಸೋಮವಾರ ಸಂಜೆ ಗಮನ ಸೆಳೆಯುವ ಸೂಚನೆಗಳಿಗೆ ಉತ್ತರಿಸಬೇಕಿದ್ದ ಸಚಿವರು ಸದನದಲ್ಲಿ ಇಲ್ಲದ್ದನ್ನು ಗಮನಿಸಿದ ಸ್ಪೀಕರ್‌, ಆಡಳಿತ ಪಕ್ಷದ ಮುಖ್ಯಸಚೇತಕ ಅಶೋಕ್‌ ಪಟ್ಟಣ್‌ ಅವರ ಸ್ಥಾನದತ್ತ ಕಣ್ಣೋಟ ಬೀರಿದರು. ಆದರೆ ಅವರೂ ಇಲ್ಲದನ್ನು ನೋಡಿ ಸಿಟ್ಟಾದರು.

ವಿಪ್‌ ಎಲ್ರಿ? ಅವರನ್ನೇ ಹುಡುಕಬೇಕಿದೆ ಎಂದು ಸ್ಪೀಕರ್‌ ಹೇಳುತ್ತಿದ್ದಂತೆ ಮಧ್ಯಪ್ರವೇಶಿಸಿದ ಲಕ್ಷ್ಮಣ ಸವದಿ, ಇಷ್ಟೊಂದು ಸಿಟ್ಟಾದ್ರೆ ಹ್ಯಾಂಗ್ರೀ ಅಧ್ಯಕ್ಷರೇ ಎಂದರು. ಮಂತ್ರಿಗಳೇ ಸರಕಾರದ ಮರ್ಯಾದೆ ತೆಗೆಯುತ್ತಾರೆ. ಶಾಸಕರು ಬೆಳಗ್ಗಿನಿಂದ ಬಂದು ಇಲ್ಲೇಕೆ ಕುಳಿತುಕೊಳ್ಳಬೇಕು? ಹೀಗಾದಾಗ ಶಾಸಕರಿಗೆ ಆಸಕ್ತಿ ಎಲ್ಲಿಂದ ಬರುತ್ತದೆ? ಉತ್ತರ ಕೊಡಬೇಕಾದ ಸಚಿವರೇ ಇಲ್ಲ ಎಂದರೆ ಏನರ್ಥ ಎಂದು ಗರಂ ಆದರು. ಆ ವೇಳೆಗೆ ಕೆಲ ಸಚಿವರು ಸದನ ಪ್ರವೇಶಿಸಿದ್ದು, ಗಮನಸೆಳೆಯವ ಸೂಚನೆಯನ್ನು ಮುಂದುವರಿಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next