Advertisement
ಮುಂದಿನದು ಇತಿಹಾಸ. ವೈಯಕ್ತಿಕ ಬದುಕಿನಲ್ಲಿ ಬಂದ ಬಿರುಗಾಳಿಗೆ ಕುಗ್ಗದೆ ಕುರಾಶ್ ಸ್ಪರ್ಧೆಯಲ್ಲಿ ದೇಶಕ್ಕೆ ಚೊಚ್ಚಲ ಪದಕ ಗೆದ್ದ ಪಿಂಕಿಯ ಕ್ರೀಡಾ ಸ್ಪೂರ್ತಿಗೆ ಸಲಾಂ ಹೇಳಲೇಬೇಕು. ಅಂದಹಾಗೆ “ಕುರಾಶ್’ ಎಂಬ ಒಂದು ಕ್ರೀಡೆಯಿದೆ ಎಂದು ಜನರಿಗೆ ಗೊತ್ತಾದದ್ದೇ ದಿಲ್ಲಿ ಮೂಲದ ಪಿಂಕಿ ಬಲ್ಹಾರ ಬೆಳ್ಳಿ ಪದಕ ಗೆದ್ದ ಬಳಿಕ!
ಪಿಂಕಿ ಬಲ್ಹಾರ ಕಠಿನ ತರಬೇತಿಯಲ್ಲಿ ತೊಡಗಿರುವಾಗಲೇ ಸಹೋದರ ಸಂಬಂಧಿ ಮೃತರಾದರೆ, ಏಶ್ಯನ್ ಗೇಮ್ಸ್ ತಂಡದಲ್ಲಿ ಸ್ಥಾನ ಪಡೆದ ಸುದ್ದಿ ತಿಳಿದ ಕೆಲವೇ ದಿನಗಳ ಬಳಿಕ ತಂದೆ ಹೃದಯಾಘಾತದಿಂದ ಸಾವನ್ನಪ್ಪಿದರು. ತಂದೆಯ ಸಾವಿನ ಬಳಿಕ ಕುಟುಂಬ ಸಹಜ ಸ್ಥಿತಿಗೆ ಮರಳುತ್ತಿದ್ದ ವೇಳೆ ಅಜ್ಜ ಕೂಡ ಇಹಲೋಕ ತ್ಯಜಿಸುತ್ತಾರೆ. ಈ ಸಂದರ್ಭದಲ್ಲಿ ಪಿಂಕಿಯನ್ನು ಮಾನಸಿಕವಾಗಿ ಗಟ್ಟಿಗೊಳಿಸಿದ್ದು ಮಾವ ಸುಮಂದರ್ ತೋಕಸ್. ತಂದೆಯ ನಿಧನ ಬಳಿಕ ಏಶ್ಯಾಡ್ನಲ್ಲಿ ಸ್ಪರ್ಧಿಸುವುದಿಲ್ಲ ಎಂದು ಕುಳಿತಿದ್ದ ಪಿಂಕಿಗೆ ಧೈರ್ಯ ತುಂಬಿ, ನೀನು ತಂದೆಯ ಕನಸನ್ನು ನನಸಾಗಿಸಲೇಬೇಕೆಂದು ಹುರಿದುಂಬಿಸಿ ತರಬೇತಿ ಮುಂದುವರಿಯಲು ಪ್ರೇರೇಪಿಸಿದರು. ಇದರ ಫಲಿತಾಂಶ ಜಕಾರ್ತಾದಲ್ಲಿ ಹೊರಹೊಮ್ಮಿದೆ.
Related Articles
Advertisement
ತಂದೆಯಿಲ್ಲದೆ ಏಶ್ಯಾಡ್ನಲ್ಲಿ ಭಾಗಿಮಗಳು ಏಶ್ಯನ್ ಗೇಮ್ಸ್ಗೆ ಆಯ್ಕೆಯಾಗಿದ್ದಾಳೆ ಎಂದು ತಿಳಿದ ತಂದೆ ಆಕೆಯೊಂದಿಗೆ ಜಕಾರ್ತಾಕ್ಕೆ ತೆರಳಲು ನಿರ್ಧರಿಸಿದ್ದರು. ಆದರೆ ವಿಧಿ ಬಯಸಿದ್ದೇ ಬೇರೆ. ಮಗಳ ಜಯವನ್ನು ಸಂಭ್ರಮಿಸಬೇಕಾಗಿದ್ದ ತಂದೆ ಇಹಲೋಕ ತೆರಳಿ ಮಗಳನ್ನು ಒಬ್ಬಂಟಿಯಾಗಿ ಪಯಣ ಬೆಳೆಸುವಂತೆ ಮಾಡಿದರು. ತಂದೆ ಪಿಂಕಿಯ ಆಟದ ವೈಖರಿಯನ್ನು ಎಂದೂ ಕಂಡವರಲ್ಲ. ತರಬೇತಿ ಸಂದರ್ಭದಲ್ಲಿ ಹೆತ್ತವರ ಉಪಸ್ಥಿತಿ ವಿಚಲಿತಗೊಳಿಸುತ್ತದೆ ಎಂಬ ಕಾರಣಕ್ಕೆ ಅವರನ್ನು ಪಿಂಕಿ ದೂರ ವಿಡುತ್ತಿದ್ದರು. ಸಾಧನೆ
ಎರಡು ಬಾರಿ ರಾಷ್ಟ್ರೀಯ ಬೆಳ್ಳಿ ಪದಕ ಗೆದ್ದಿರುವ ಪಿಂಕಿ ಆರಂಭದಲ್ಲಿ ಜೂಡೋದಲ್ಲಿ ಗುರುತಿಸಿಕೊಂಡಿದ್ದರು. 2016ರಲ್ಲಿ ವಿಯೆಟ್ನಾಂನಲ್ಲಿ ನಡೆದ ಏಶ್ಯನ್ ಬೀಚ್ ಗೇಮ್ಸ್ನಲ್ಲಿ ಕಂಚಿನ ಪದಕ, ಪ್ರಸಕ್ತ ಋತುವಿನ ಕಿರಿಯರ ಏಶ್ಯನ್ ಚಾಂಪಿಯನ್ಶಿಪ್ 52 ಕೆಜಿ ಸ್ಪರ್ಧೆಯಲ್ಲಿ ಚಿನ್ನದ ಪದಕ, ಪುಣೆಯಲ್ಲಿ ನಡೆದ ಏಶ್ಯನ್ ಚಾಂಪಿಯನ್ಶಿಪ್ನಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಏಶ್ಯನ್ ಗೇಮ್ಸ್ ಕುರಾಶ್ನಲ್ಲಿ ಬೆಳ್ಳಿ ಪದಕ ಪಡೆದದ್ದು ಉತ್ತಮ ಪ್ರದರ್ಶನವಾಗಿದೆ. ನನ್ನ ಜೀವನದ ಅತ್ಯಂತ ಕೆಟ್ಟ ಸಮಯವದು. ಮೂರು ತಿಂಗಳ ಅಂತರದಲ್ಲಿ ಆಪ್ತರು ಎಂದೆನಿಸಿಕೊಂಡವರು ನನ್ನಿಂದ ದೂರ ಹೋಗಿದ್ದರು.
ಏಶ್ಯಾಡ್ಗೂ ಮೊದಲು ತಂದೆ ನನ್ನ ಬಳಿ ಕುಡಿಯಲು ನೀರು ತರಲು ಹೇಳಿದ್ದರು. ಆದರೆ ನಾನು ಅವರ ಮಾತನ್ನು ಕೇಳಲಿಲ್ಲ. ಆಗ, ತಂದೆಯ ಮಾತನ್ನು ಕೇಳುತ್ತಿಲ್ಲ. ಈ ರೀತಿ ನಡೆದುಕೊಂಡರೆ ನೀನು ಏಶ್ಯನ್ ಗೇಮ್ಸ್ನಲ್ಲಿ ಚಿನ್ನ ಗೆಲ್ಲುವುದಿಲ್ಲ. ಬೆಳ್ಳಿ ಪದಕ ಗೆಲ್ಲುತ್ತೀಯ ಎಂದು ಹೇಳಿದ್ದರು. ಏಶ್ಯಾಡ್ನಲ್ಲಿ ಪದಕ ಗೆದ್ದ ಬಳಿಕ ಆ ಮಾತುಗಳನ್ನು ನೆನಪಿಸಿಕೊಂಡೆ .
-ಪಿಂಕಿ ಬಲ್ಹಾರ ರಮ್ಯಾ ಕೆದಿಲಾಯ/ಪ್ರೇಮಾನಂದ ಕಾಮತ್