Advertisement

Asia Cup: ಶ್ರೀಲಂಕಾದ ಮಿಸ್ಟರಿ ಸ್ಪಿನ್ನರ್‌ ಮಹೀಶ ತೀಕ್ಷಣ ಗಾಯಾಳು

02:20 AM Sep 16, 2023 | Team Udayavani |

ಕೊಲಂಬೊ: ಏಷ್ಯಾ ಕಪ್‌ ಫೈನಲ್‌ ಪಂದ್ಯಕ್ಕೂ ಮುನ್ನ ಶ್ರೀಲಂಕಾ ತಂಡ ಆಘಾತವೊಂದಕ್ಕೆ ಸಿಲುಕಿದೆ. ಮಿಸ್ಟರಿ ಸ್ಪಿನ್ನರ್‌ ಮಹೀಶ ತೀಕ್ಷಣ ಸ್ನಾಯು ಸೆಳೆತಕ್ಕೆ ಒಳಗಾಗಿದ್ದಾರೆ.

Advertisement

ಪಾಕಿಸ್ಥಾನ ವಿರುದ್ಧದ ಸೂಪರ್‌-4 ಪಂದ್ಯದಲ್ಲಿ ಕ್ಷೇತ್ರರಕ್ಷಣೆ ನಡೆಸುತ್ತಿದ್ದಾಗ ತೀಕ್ಷಣ ಬಲ ಸ್ನಾಯು ಸೆಳೆತಕ್ಕೊಳಗಾದರು. ಸ್ಕ್ಯಾನಿಂಗ್‌ ನಡೆಸಲಾಗಿದೆ. ಇದರ ವರದಿಯನ್ನು ಕಾಯಲಾಗುತ್ತಿದೆ ಎಂದು ಶ್ರೀಲಂಕಾ ಕ್ರಿಕೆಟ್‌ ಮಂಡಳಿ ತಿಳಿಸಿದೆ.

ಶ್ರೀಲಂಕಾದ ಬೌಲಿಂಗ್‌ ವೇಳೆ ತೀಕ್ಷಣ ಒಂದೆರಡು ಸಲ ಮೈದಾನ ತೊರೆ ದಿದ್ದರು. ಆದರೆ ತಮ್ಮ 9 ಓವರ್‌ಗಳ ಕೋಟಾವನ್ನು ಪೂರ್ತಿ ಗೊಳಿಸಿದ್ದರು.

ಶ್ರೀಲಂಕಾ ಈಗಾಗಲೇ ವನಿಂದು ಹಸರಂಗ, ದುಷ್ಮಂತ ಚಮೀರ, ಲಹಿರು ಕುಮಾರ, ಮಧುಶಂಕ ಮೊದಲಾದ ಪ್ರಮುಖ ಬೌಲರ್‌ಗಳ ಸೇವೆಯಿಂದ ವಂಚಿತವಾಗಿದೆ. ಒಂದು ವೇಳೆ ಭಾರತದೆದುರಿನ ಫೈನಲ್‌ನಲ್ಲಿ ತೀಕ್ಷಣ ಆಡದೇ ಹೋದರೆ ಅದು ಶ್ರೀಲಂಕಾಕ್ಕೆ ದೊಡ್ಡ ಹಿನ್ನಡೆಯಾಗುವುದರಲ್ಲಿ ಅನುಮಾನವಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next