Advertisement

ನೀರಿನ ಗಲಾಟೆ ತಡೆಯಲು ಹೋದ ಎಎಸ್ಐ ಗೆ ಇಟ್ಟಿಗೆಯಿಂದ ಹೊಡೆದು ಹಲ್ಲೆ!

01:29 PM Feb 21, 2022 | Team Udayavani |

ಹುಬ್ಬಳ್ಳಿ: ನೀರಿನ ವಿಷಯಕ್ಕೆ ಸಂಬಂಧಿಸಿ ಅಕ್ಕಪಕ್ಕದ ಮನೆಯವರ ನಡುವೆ ನಡೆದ ಮಾತಿನ ಚಕಮಕಿಯಲ್ಲಿ ಪೊಲೀಸ್ ಎಂಬುದನ್ನು ಲೆಕ್ಕಿಸದೆ ಇಟ್ಟಿಗೆಯಿಂದ ತಲೆಗೆ ಹೊಡೆದು ಮಾರಣಾಂತಿಕ ಹಲ್ಲೆ ಮಾಡಿದ ಘಟನೆ ಸೋಮವಾರ ಇಲ್ಲಿನ ಹಳೇಹುಬ್ಬಳ್ಳಿ ಆರ್. ಎನ್. ‌ಶೆಟ್ಟಿ ರಸ್ತೆಯ ಸಹದೇವ ನಗರದಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ಉತ್ತರ ಸಂಚಾರ ಠಾಣೆಯ ಎಎಸ್ ಐ ಪರ್ವತಯ್ಯ ಜಿ. ಪುರಾಣಿಮಠ ಗಾಯಗೊಂಡಿದ್ದಾರೆ.

ನೀರಿನ ವಿಷಯವಾಗಿ ಪಕ್ಕದ ಮನೆ ಮಹಿಳೆಯರು ಜಗಳ ಮಾಡುತ್ತಿದ್ದಾಗ ಅವರನ್ನು ಸಮಾಧಾನಪಡಿಸಲು ಎಎಸ್ಐ ಪುರಾಣಿಮಠರು ಮುಂದಾದಾಗ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ಹೋಗುತ್ತಿದ್ದಂತೆ ಭರತೇಶ ಎಂಬಾತನು ಎಎಸ್ಐಗೆ ಇಟ್ಟಿಗೆಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದು, ಸದ್ಯ ಗೋಕುಲ ರಸ್ತೆಯ ಡಾಲರ್ಸ್ ಕಾಲೋನಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಶಿವಮೊಗ್ಗ ಘಟನೆಯಲ್ಲಿ ಕೆ.ಎಸ್.ಈಶ್ವರಪ್ಪ ಪಾತ್ರ ಎದ್ದು ಕಾಣುತ್ತಿದೆ: ಮಾಜಿ ಸಚಿವ ಅನ್ಸಾರಿ

ಎಎಸ್ಐ ಪುರಾಣಿಮಠ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಹಳೇಹುಬ್ಬಳ್ಳಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next