Advertisement

ದಿಂಡ ಹಣೆಗೆ ಬಡಿದ ಚೆಂಡು

12:45 AM Feb 12, 2019 | Team Udayavani |

ಕೋಲ್ಕತಾ: ಟಿ20 ಕ್ರಿಕೆಟ್‌ ಪಂದ್ಯದ ವೇಳೆ ಬಂಗಾಲದ ಪೇಸ್‌ ಬೌಲರ್‌ ಅಶೋಕ್‌ ದಿಂಡ ಅವರ ಹಣೆಗೆ ಚೆಂಡು ಬಡಿದ ಘಟನೆ ಸೋಮವಾರ ಸಂಭವಿಸಿದ್ದು, ಮುನ್ನೆಚ್ಚರಿಕೆಯ ಕ್ರಮವಾಗಿ ಅವರಿಗೆ 2 ದಿನಗಳ ವಿಶ್ರಾಂತಿ ಸೂಚಿಸಲಾಗಿದೆ.

Advertisement

ಸೋಮವಾರ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಬಂಗಾಲ ಟಿ20 ಅಭ್ಯಾಸ ಪಂದ್ಯದ ವೇಳೆ ಈ ಘಟನೆ ಸಂಭವಿಸಿದೆ. ಬ್ಯಾಟ್ಸ್‌ಮನ್‌ ಬೀರೇಂದರ್‌ ವಿವೇಕ್‌ ಸಿಂಗ್‌ ಬಲವಾಗಿ ಬಾರಿಸಿದ ಚೆಂಡನ್ನು ರಿಟರ್ನ್ ಕ್ಯಾಚ್‌ ಪಡೆಯುವ ವೇಳೆ ಅಶೋಕ್‌ ದಿಂಡ ಈ ಆಘಾತಕ್ಕೆ ಸಿಲುಕಿದ್ದಾರೆ. ಆಗ ಚೆಂಡು ಅವರ ಕೈಯಿಂದ ಜಾರಿ ಹಣೆಗೆ ಹೋಗಿ ಬಡಿಯಿತು. ಇದರಿಂದ ಗಂಭೀರ ಪೆಟ್ಟೇನೂ ಸಂಭವಿಸಲಿಲ್ಲ. ಆ ಓವರ್‌ ಪೂರ್ತಿಗೊಳಿಸಿದ ಬಳಿಕ ಅಶೋಕ್‌ ದಿಂಡ ಡ್ರೆಸ್ಸಿಂಗ್‌ ರೂಮ್‌ಗೆ ವಾಪಸಾದರು.

ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಕ್ಯಾನಿಂಗ್‌ ನಡೆಸಲಾಗಿದ್ದು, ವೈದ್ಯರು ದಿಂಡ ಅವರಿಗೆ 2 ದಿನ ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next