Advertisement

ದಿಲ್ಲಿಗೆ ರಾಜ್ಯ ಸ್ಥಾನಮಾನ ನೀಡಿದರೆ ಬಿಜೆಪಿಗೆ ಓಟ್‌: ಕೇಜ್ರಿವಾಲ್‌

07:12 PM Jun 11, 2018 | Team Udayavani |

ಹೊಸದಿಲ್ಲಿ : 2019ರ ಲೋಕಸಭಾ ಚುನಾವಣೆಗೆ ಮೊದಲು ಕೇಂದ್ರ ಸರಕಾರ ದಿಲ್ಲಿಗೆ ಪೂರ್ಣ ಮಟ್ಟದ ರಾಜ್ಯ ಸ್ಥಾನಮಾನ ಮಂಜೂರು ಮಾಡಿದರೆ, ಮಹಾ ಚುನಾವಣೆಯಲ್ಲಿ ಆಮ್‌ ಆದ್ಮಿ ಪಕ್ಷದ ಪ್ರತಿಯೊಂದು ಮತವೂ ಬಿಜೆಪಿಗೆ ಸಿಗುವಂತೆ ಮಾಡುತ್ತೇನೆ ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಹೇಳಿದ್ದಾರೆ.

Advertisement

ಒಂದೊಮ್ಮೆ ಕೇಂದ್ರ ಸರಕಾರ ಲೋಕಸಭಾ ಚುನಾವಣೆಗೆ ಮುನ್ನ ದಿಲ್ಲಿಗೆ ರಾಜ್ಯ ಸ್ಥಾನ ಮಾನ ನೀಡದಿದ್ದರೆ ದಿಲ್ಲಿಗರು “ಬಿಜೆಪಿ ದಿಲ್ಲಿಯಿಂದ ತೊಲಗು’ ಎಂಬ ಫ‌ಲಕವನ್ನು ಹಾಕುವರು ಎಂದು ಕೇಜ್ರಿವಾಲ್‌ ಬೆದರಿಕೆ ಹಾಕಿದರು. 

ದಿಲ್ಲಿಗೆ ಪೂರ್ಣ ಮಟ್ಟದ ಸ್ಥಾನಮಾನಕ್ಕಾಗಿ ನಿನ್ನೆ ಭಾನುವಾರದಿಂದ ಅಭಿಯಾನ ಆರಂಭಿಸಿರುವ ಆಮ್‌ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್‌ ಅವರು, “ಎಲ್‌ಜಿ, ದಿಲ್ಲಿ ಛೋಡೋ’ ಘೋಷಣೆಯನ್ನು  ನಗರದ ಆದ್ಯಂತ ಅನುರಣಿಸುವಂತೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next