Advertisement

Arunagiri ಗ್ರಾಮಸ್ಥರಿಂದ ರಸ್ತೆಯ ಗುಂಡಿ ಮುಚ್ಚುವ ಮಹತ್ಕಾರ್ಯ: ಶಿವನ್ ಗೌಡ ಮೆಚ್ಚುಗೆ

04:33 PM Sep 23, 2024 | Shreeram Nayak |

ತೀರ್ಥಹಳ್ಳಿ : ತಾಲೂಕಿನ ಪ್ರಖ್ಯಾತ ಧಾರ್ಮಿಕ ಕ್ಷೇತ್ರವಾದ, ಎರಡನೇ ತಿರುಪತಿ ಎಂದೇ ಪ್ರಖ್ಯಾತಿ ಪಡೆದ ಅರುಣಗಿರಿಯ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಗೋಪಿನಾಥ ಹಳ್ಳದ ಸೇತುವೆಯಿಂದ ಕುಣಿಗದ್ದೆಯವರೆಗೆ 1 ಕಿಲೋ ಮೀಟರ್ ದೂರದ ಡಾಂಬರ್ ರಸ್ತೆ ಭಾರಿ ಮಳೆಯಿಂದಾಗಿ ಹೊಂಡ ಗುಂಡಿಗಳಾಗಿದ್ದವು.

Advertisement

ಅರುಣಗಿರಿ ಕುಣಿಗದ್ದೆ ದಾಸನಗದ್ದೆಯ ಗ್ರಾಮಸ್ಥರು ಮತ್ತು ವಿನಾಯಕ ಸೇವಾ ಸಮಿತಿಯವರೆಲ್ಲರೂ ಸೇರಿ ತಾವೇ ಹೊಂಡ ಮುಚ್ಚುವ ಮಹತ್ಕಾರ್ಯಕ್ಕೆ ಕೈ ಜೋಡಿಸಿ ಭಾನುವಾರ ಹೊಂಡ ಗುಂಡಿ ಮುಚ್ಚುವ ಕಾರ್ಯ ನೆರವೇರಿಸಿದರು.

ಈ ವೇಳೆ ಇದೇ ರಸ್ತೆಯಲ್ಲಿ ಬರುತ್ತಿದ್ದ ತೀರ್ಥಹಳ್ಳಿಯ ಪೊಲೀಸ್ ಸಬ್ ಇನ್ಸಪೆಕ್ಟರ್ ಶಿವನ್ ಗೌಡರವರು ಗ್ರಾಮಸ್ಥರ ಸಮಾಜಮುಖಿ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮತದಾನದ ವೇಳೆ ಚುನಾವಣೆ ಸಮಯದಲ್ಲಿ ರಸ್ತೆ ಆಗಿಲ್ಲ ಎಂದು ಬಹಿಷ್ಕಾರ ಹಾಕುವ ಬದಲು ಹೀಗೆ ತಮ್ಮ ಊರಿನ ರಸ್ತೆಗಳನ್ನು ಹಾಗೂ ಅಕ್ಕ ಪಕ್ಕದ ಊರಿನ ಸ್ವಚ್ಛತೆಯನ್ನು ನಾವೇ ಸರಿ ಪಡಿಸಿಕೊಂಡಿದ್ದರೆ ನಮ್ಮೆಲ್ಲರ ಗ್ರಾಮ, ಊರು ಸ್ವಚ್ಛಂದವಾಗಿರಲಿದೆ. ನಿಮ್ಮೆಲ್ಲರ ಸಮಾಜಮುಖಿ ಕೆಲಸ ಮುಂದುವರೆಸಿ ಎಂದು ಹಾರೈಸಿದರು.

 

Advertisement

Udayavani is now on Telegram. Click here to join our channel and stay updated with the latest news.

Next