Advertisement

ಹಣಕ್ಕಾಗಿ ಪೀಡಿಸುತ್ತಿದ್ದ 2ನೇ ಪತ್ನಿ ಕೊಲೆಗೈದ ಪತಿ, ಪುತ್ರ ಸೆರೆ

03:41 PM Feb 04, 2021 | Team Udayavani |

ಶಿಡ್ಲಘಟ್ಟ: ಮನೆ ನಿರ್ಮಿಸಿಕೊಳ್ಳಲು ಹಣಕ್ಕಾಗಿ ಪೀಡಿಸುತ್ತಿದ್ದ ಎರಡನೇ ಪತ್ನಿಯನ್ನು ಪತಿ ಸೇರಿದಂತೆ ಆತನ ಮೊದಲ ಪತ್ನಿಯ ಪುತ್ರ ಕೊಲೆ ಮಾಡಿರುವ ಸಂಬಂಧ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ.

Advertisement

ತಾಲೂಕಿನ ದಿಬ್ಬೂರಹಳ್ಳಿ ಪೊಲೀಸ್‌ ಠಾಣೆ ವ್ಯಾಪ್ತಿಯ ಎಸ್‌.ಗೊಲ್ಲಹಳ್ಳಿಯ ಜ್ಯೋತಿ ಕೊಲೆಯಾಗಿದ್ದ ಮಹಿಳೆ. ಪೂಸಗಾನದೊಡ್ಡಿಯ ನರಸಿಂಹಪ್ಪ ಹಾಗೂ ಆತನ ಮೊದಲನೇ ಪತ್ನಿಯ ಮಗ ನವೀನ್‌ ಕುಮಾರ್‌ ಬಂಧಿತರು.

ಏನಿದು ಘಟನೆ?: ಪೂಸಗಾನದೊಡ್ಡಿಯ ನರಸಿಂಹಪ್ಪ ಎಂಬಾತ ಮೊದಲೇ ಪತ್ನಿ ಇದ್ದರೂ ಎಸ್‌.ಗೊಲ್ಲಹಳ್ಳಿಯ ಜ್ಯೋತಿಯೊಂದಿಗೆ ವಿವಾಹವಾಗಿದ್ದ ಎನ್ನಲಾಗಿದೆ.

ಮೊದಲ ಪತ್ನಿಗೆ ನಾಲ್ವರು ಮಕ್ಕಳಿದ್ದಾರೆ. ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದರು. ಆದರೆ, ನರಸಿಂಹಪ್ಪನೊಂದಿಗೆ ವಿವಾಹವಾಗಿದ್ದ ಜ್ಯೋತಿ 14 ವರ್ಷದ ಹೆಣ್ಣುಮಗಳೊಂದಿಗೆ ಪ್ರತ್ಯೇಕವಾಗಿರಲು ಮನೆ ನಿರ್ಮಿಸಿಕೊಳ್ಳಲು ಹಣ ನೀಡುವಂತೆ ನರಸಿಂಹಪ್ಪನಿಗೆ ಒತ್ತಾಯಿಸುತ್ತಿದ್ದರೆನ್ನಲಾಗಿದೆ.

ಆದರೆ, ನರಸಿಂಹಪ್ಪ ಯಾವುದೇ ಸೌಲಭ್ಯ ಒದಗಿಸಿರಲಿಲ್ಲ ಎಂದು ಹೇಳಲಾಗಿದೆ. ಆದರೇ 2007ರ ಜು.1ರಂದು ಜ್ಯೋತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದಳು. ಜ್ಯೋತಿ ಪುತ್ರಿಯನ್ನು ಕರೆದುಕೊಳ್ಳುವಂತೆ

Advertisement

ಅಳಿಯ ನರಸಿಂಹಪ್ಪ ಎಂಬಾತನನ್ನು ಅತ್ತೆ ಮುನಿನಾರಾಯಣಮ್ಮ ಕೇಳಿಕೊಂಡಾಗ, ತಾನು ಏಕೆ ಇಟ್ಟುಕೊಳ್ಳಿ. ನಿನ್ನ ಮಗಳು ಅಕ್ರಮ ಸಂಬಂಧವಿಟ್ಟುಕೊಂಡಿದ್ದಳು ಅದಕ್ಕೆ ಕೊಂದಿದ್ದೇನೆ. ಇನ್ನು ಮುಂದೆ ತನ್ನ ತಂಟೆಗೆ ಬಂದರೇ ನಿನಗೂ ನಿನ್ನ ಮಗಳ ಗತಿ ಕಾಣಿಸುತ್ತೇನೆ ಎಂದು ಬೆದರಿಕೆ ಹಾಕಿದ್ದನು ಎಂದು ಮುನಿನಾರಾಯಣಮ್ಮ ದಿಬ್ಬೂರಹಳ್ಳಿ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಿಥುನ್‌ಕುಮಾರ್‌ ಅವರ ಮಾರ್ಗದರ್ಶನದಲ್ಲಿ ಸಿಪಿಐ ಸುರೇಶ್‌, ಪಿಎಸ್‌ಐ ನಾರಾಯಣಪ್ಪ ಮತ್ತು ಸಿಬ್ಬಂದಿ ಒಳಗೊಂಡಂತೆ ರಚಿಸಿದ ತಂಡ ತನಿಖೆ ನಡೆಸಿ ಜ್ಯೋತಿ ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ಕೊಲೆ ಪ್ರಕರಣವನ್ನು ದಾಖಲಿಸಿಕೊಂಡು ಗಂಡ ನರಸಿಂಹಪ್ಪ, ಆತನ ಪುತ್ರ ನವೀನ್‌ ಕುಮಾರ್‌ನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next