Advertisement

ನೀರು ಹರಿಯಲು ವ್ಯವಸ್ಥೆ; ಕುಸಿತ ಭೀತಿ ದೂರ

10:41 AM Jun 28, 2018 | Team Udayavani |

ವಾಮಂಜೂರು: ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ ಸಂಭವಿಸಿರುವ ಸ್ಥಳಕ್ಕೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳು ಭೇಟಿ ನೀಡಿ ಪರಿಶೀಲಿಸಿದ್ದು, ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಲಾಗಿದೆ. ಕುಸಿತ ಪ್ರದೇಶಕ್ಕೆ ಹೆದ್ದಾರಿ ಇಲಾಖೆಯ ಎಂಜಿನಿಯರ್‌ಗಳು ಭೇಟಿ ನೀಡಿ ಕಾಮಗಾರಿ ನಡೆಸಿಕೊಟ್ಟಿದ್ದಾರೆ.

Advertisement

ಕೆತ್ತಿಕಲ್‌ ಪ್ರದೇಶದ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ರಸ್ತೆಯಲ್ಲಿ ಬಿರುಕು ಹಾಗೂ ಅದರ ಬದಿಯಲ್ಲಿ ಆಳವಾದ ತೂತು ಕಂಡುಬಂದಿದ್ದರಿಂದ ಈ ಭಾಗ ಕುಸಿಯುವ ಭೀತಿ ವ್ಯಕ್ತವಾಗಿತ್ತು. ಸುಮಾರು 20 ವರ್ಷಗಳ ಮುಂಚೆ ಈ ಭಾಗದಲ್ಲಿ ಕುಸಿತ ಕಂಡುಬಂದಿದ್ದು, ಸ್ವಲ್ಪ ದಿನಗಳ ಕಾಲ ಸಂಚಾರ ಸ್ಥಗಿತ ಗೊಂಡಿತ್ತು. ಇದೀಗ ಮತ್ತೆ ಕುಸಿ ಯುವ ಭೀತಿ ವ್ಯಕ್ತವಾಗಿದ್ದರಿಂದ ಈ ರಸ್ತೆಯಾಗಿ ಸಂಚರಿಸುವ ವಾಹನಗಳಿಗೆ ಅಪಾಯ ಒದಗುವ ಸಾಧ್ಯತೆ ಇತ್ತು. ಈ ಹಿನ್ನೆಲೆಯಲ್ಲಿ ಎಇಇ ಆಗಿರುವ ಯಶವಂತ್‌ ಹಾಗೂ ಇತರ ಅಧಿಕಾರಿಗಳು ಭೇಟಿ ನೀಡಿ ನೀರು ಹರಿಯಲು ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಅಲ್ಲದೆ ಆಳವಾದ ತೂತನ್ನು ಮುಚ್ಚಲಾಗಿದೆ.

ಕೆತ್ತಿಕಲ್‌ ಗುಡ್ಡ ಭಾಗದಿಂದ ಮಳೆಯ ನೀರು ರಸ್ತೆಯ ಒಳಗಿನಿಂದ ಹರಿಯುತ್ತಿದ್ದ ಕಾರಣ ಆಳವಾದ ತೂತು ಕಾಣಿಸಲು ಕಾರಣವಾಗಿತ್ತು. ಇದಕ್ಕಾಗಿ ರಸ್ತೆಯ ನೀರು ಹರಿಯುವ ಭಾಗದಲ್ಲಿ ಜೆಸಿಬಿಯಿಂದ ತೋಡು ಮಾಡಿ ಮಣ್ಣಿನಡಿಯಲ್ಲಿ ಹುದುಗಿಹೋಗಿದ್ದ ಮೋರಿಯನ್ನು ತೆರೆದು ಆ ಮೂಲಕ ನೀರು ಹರಿಯಲು ವ್ಯವಸ್ಥೆ ಮಾಡ ಲಾಗಿದೆ. ಇದೀಗ ಕಾಡನೀರು ಮೋರಿಯ ಮೂಲಕ ರಸ್ತೆಯ ಒಳಗಿನಿಂದಲೇ ಹಾದು ಹೋಗಿ ಗುಡ್ಡದಿಂದ ಇಳಿಯುತ್ತಿದೆ.

ಯಾವುದೇ ಆತಂಕವಿಲ್ಲ
ಕೆತ್ತಿಕಲ್‌ ಪ್ರದೇಶದಲ್ಲಿ ನೀರು ಹರಿಯುವ ಮೋರಿ ಮುಚ್ಚಿಹೋಗಿದ್ದರಿಂದ ಈ ಸ್ಥಿತಿ ಉಂಟಾಗಿದೆ. ನೀರು ಹರಿ ಯಲು ತೋಡನ್ನು ಬಿಡಿಸಿ ಕೊಟ್ಟ ಕಾರಣ ಆತಂಕವಿಲ್ಲ. ವಾಹನಗಳು ಎಂದಿನಂತೆ ಸಾಗಬಹುದು. ಅಲ್ಲದೆ ಈ ಭಾಗದಲ್ಲಿ ಕುಸಿಯುವ ಆತಂಕವೂ ಇಲ್ಲ. ಆದ್ದರಿಂದ ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲ.
 

Advertisement

Udayavani is now on Telegram. Click here to join our channel and stay updated with the latest news.

Next