Advertisement

ಆರೋಹಣಕ್ಕೆ ಸಕಲೇಶಪುರದಲ್ಲಿ ಹಾಡು

02:52 PM Mar 09, 2018 | Team Udayavani |

ಮಲ್ಲಿಕಾರ್ಜುನ್‌ ಪ್ರೊಡಕ್ಷನ್‌ ಲಾಂಛನದಲ್ಲಿ ಸುಶಿಲ್‌ ಕುಮಾರ್‌ ನಿರ್ಮಿಸುತ್ತಿರುವ “ಆರೋಹಣ’ ಚಿತ್ರಕ್ಕೆ ಕಳೆದ ವಾರ ಸಕಲೇಶಪುರ, ರಾಮನಗರ, ಬಿಡದಿ ಸುತ್ತ ಮುತ್ತ “ಸ್ವೀಕರಿಸು ಹೃದಯ, ಸ್ವೀಕರಿಸು ನನ್ನ ಹೃದಯದಲ್ಲಿ ಮತ್ತೆ ಮರುಕಳಿಸು, ಪ್ರೀತಿಯೆಂಬ ಕಣ್ಣಿಲ್ಲದ ಕುದುರೆಯ ಓಟವಿದು …’  ಎಂಬ ಹಾಡಿನೊಂದಿಗೆ ಒಟ್ಟು ನಾಲ್ಕು ಹಾಡುಗಳನ್ನು ಚಿತ್ರೀಕರಿಸುವುದರೊಂದಿಗೆ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು ಇದೀಗ ಪ್ರಥಮ ಪ್ರತಿ ಕೂಡ ಹೊರ ಬಂದಿದೆ.  ಏಪ್ರಿಲ್‌ ತಿಂಗಳಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

Advertisement

ಶ್ರೀಧರ್‌ ಶೆಟ್ಟಿ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ, ಕೆ.ವೈ.ಶಿವಪುತ್ರ ಛಾಯಾಗ್ರಹಣ, ಉತ್ತಮ್‌ರಾಜ್‌ ಆರ್‌.ಎನ್‌. ಹಾಗೂ ರಾಹುಲ್‌ ರಾಘವನ್‌ ಸಂಗೀತ, ಕೆ.ಕಲ್ಯಾಣ್‌, ಶ್ರೀಧರ್‌ ಶೆಟ್ಟಿ ಸಾಹಿತ್ಯ ಜಗ್ಗು ನೃತ್ಯ ನಿರ್ದೇಶನ, ವೈಲೆಂಟ್‌ ವೇಲು ಸಾಹಸ.  ದುರ್ಗ ಪಿ.ಎಸ್‌.ಸಂಕಲನವಿದೆ. ಸುಶೀಲ್‌ಕುಮಾರ್‌, ರೋಹಿತ್‌ ಶೆಟ್ಟಿ, ಪ್ರೀತಿ, ಶ್ರೀಧರ್‌ ಶೆಟ್ಟಿ, ರುದ್ರೇಗೌಡ, ಉಮೇಶ್‌ ಪುಂಗ, ದೀಕ್ಷ, ಮೈತ್ರಿ, ರವಿ, ಮಣಿ, ಆಶಾ, ಜೂ. ಸಾಯಿಬಾಬಾ ಇನ್ನೂ ಮುಂತಾದವರ ತಾರಾಬಳಗವಿದೆ. 

Advertisement

Udayavani is now on Telegram. Click here to join our channel and stay updated with the latest news.

Next