Advertisement

ಜಮ್ಮು: ಗುಂಡು ಹಾರಿಸಿಕೊಂಡು ಬಾಗಲಕೋಟೆ ಮೂಲದ ಯೋಧ ಆತ್ಮಹತ್ಯೆ

12:31 PM Apr 27, 2021 | Team Udayavani |

ಜಮ್ಮು-ಕಾಶ್ಮೀರ:ಕರ್ನಾಟಕ ಮೂಲದ ಯೋಧರೊಬ್ಬರು ತನಗೆ ತಾನೇ ರೈಫಲ್ ನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಮ್ಮು-ಕಾಶ್ಮೀರದ ರಂಬಾನ್ ಜಿಲ್ಲೆಯಲ್ಲಿ ಮಂಗಳವಾರ(ಏಪ್ರಿಲ್ 27) ನಡೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಕೊರೊನಾಜನಕ ಕಥೆಗಳು: ಸೋಂಕಿಗೆ ಬಲಿಯಾದ ಇಬ್ಬರ ಅಂತ್ಯಕ್ರಿಯೆ ನಡೆದಿದ್ದು ಹೀಗೆ.. :

ಮೃತ ಯೋಧನನ್ನು ಕರ್ನಾಟಕದ ಬಾಗಲಕೋಟೆಯ ಅಸಂಗೆಪ್ಪ ಮಾದಾರ(28ವರ್ಷ) ಎಂದು ಗುರುತಿಸಲಾಗಿದೆ. ಮಾದಾರ್ ಅವರನ್ನು ಬನಿಹಾಲ್ ನ ಆರ್ ಸೆಂಟರ್ ಕ್ಯಾಂಪ್ ನಲ್ಲಿ ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಅಸಂಗೆಪ್ಪ ಮಾದಾರ್ ಅವರು ಬನಿಹಾಲ್ ನ ಸೇನಾ ಶಿಬಿರದಲ್ಲಿ ಇರುವಾಗಲೇ ಮುಂಜಾನೆ 2ಗಂಟೆ ಸುಮಾರಿಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.

ಗುಂಡು ಹಾರಿಸಿಕೊಂಡ ಶಬ್ದ ಕೇಳಿ ಬಂದ ಕೂಡಲೇ ಇತರ ಯೋಧರು ಸ್ಥಳಕ್ಕೆ ಆಗಮಿಸಿದಾಗ ಮಾದಾರ್ ರಕ್ತದ ಮಡುವಿನಲ್ಲಿ ಬಿದ್ದಿದ್ದು, ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಆದರೆ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next