Advertisement

ನಿಮ್ಮ ಶಾಸಕರು ಸತ್ತೋದ್ರಾ ? ಅಹವಾಲು ನೀಡಿದ ಮಹಿಳೆಗೆ ಸಚಿವ ಹೆಗಡೆ!

04:48 PM Jul 01, 2018 | Team Udayavani |

ಶಿರಸಿ: ಸದಾ ಒಂದಿಲ್ಲೊಂದು ಹೇಳಿಕೆಗಳಿಂದ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಭಾನುವಾರ ಮತ್ತೆ ತನ್ನದೇ ಶೈಲಿಯಲ್ಲಿ ಕಾಂಗ್ರೆಸ್‌ ಶಾಸಕರೊಬ್ಬರ ವಿರುದ್ಧ ಪರೋಕ್ಷ ಅಸಮಾಧಾನ ಹೊರ ಹಾಕಿದ್ದಾರೆ.

Advertisement

ಶಿರಸಿಯಲ್ಲಿ ನಡೆದ ಸಮಾರಂಭದ ಬಳಿಕ ಕಾರು ಹತ್ತಿದಾಗ ಮಹಿಳೆಯೊಬ್ಬರು ಯಲ್ಲಾಪುರದ ಹಳ್ಳಿಯೊಂದರ ಸರ್ಕಾರಿ ಆಸ್ಪತ್ರೆಗೆ ವೈದ್ಯಾಧಿಕಾರಿಯನ್ನು ನೇಮಕ ಮಾಡುವಂತೆ ಮನವಿ ಮಾಡಿದ್ದಾರೆ. 

ಉತ್ತರಿಸಿ ಸಚಿವ ಹೆಗಡೆ ಏನು ನಿಮ್ಮ ಶಾಸಕರು ಸತ್ತೋಗಿದ್ದಾರಾ ಎಂದು ಖಾರವಾಗಿ ಪ್ರಶ್ನಿಸಿದರು.

ಶಾಸಕರು ಇದ್ದಾರೆ ನಮಗೆ ನೀವೆ ಶಾಸಕರು ಎಂದು ಮಹಿಳೆ ಮತ್ತೆ ಮನವಿ ಮಾಡಿದರು. 

ಯಲ್ಲಾಪುರ ಕಾಂಗ್ರೆಸ್‌ ಶಾಸಕ ಶಿವರಾಮ್‌ ಹೆಬ್ಬಾರ್‌ ವಿರುದ್ದ ಸಚಿವ ಹೆಗಡೆ ಈ ರೂಪದಲ್ಲಿ  ಆಕ್ರೋಶ  ಹೊರಹಾಕಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next