Advertisement

Basangouda Patil Yatnal: ಬಿಜೆಪಿ ಶಾಸಕರು ಕಾಂಗ್ರೆಸ್‌ ಸೇರಲು ಹುಚ್ಚು ಹಿಡಿದಿದೆಯಾ?

12:20 AM Oct 28, 2024 | Shreeram Nayak |

ವಿಜಯಪುರ: ಬಿಜೆಪಿ ಶಾಸಕರು ಕಾಂಗ್ರೆಸ್‌ಗೆ ಸೇರಲು ಹುಚ್ಚು ಹಿಡಿದಿದೆಯಾ? ಸುಮ್ಮನೆ ಹಾಗೇ ಹೇಳುತ್ತಾರೆ. ಕಾಂಗ್ರೆಸ್‌ನವರು ಹೇಳಿದ ಬಳಿಕ ಬಿಜೆಪಿಯವರೂ ಕಾಂಗ್ರೆಸ್‌ನ 20 ಮಂದಿ ಬರುತ್ತಾರೆಂದು ಹೇಳುತ್ತಾರೆ. ಅವರೂ ಬರಲ್ಲಾ, ಇವರೂ ಬರಲ್ಲಾ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

Advertisement

ಸುದ್ದಿಗಾರರ ಜತೆ ಮಾತನಾಡಿ, ನಾವು ವಿಪಕ್ಷದಲ್ಲೇ ಇರುತ್ತೇವೆ. ನಾವು ಹೋರಾಟ ಮಾಡದಿದ್ದರೂ ಈ ಸರಕಾರ ತನ್ನಿಂದ ತಾನೇ ಬೀಳುತ್ತದೆ. ಮುಖ್ಯಮಂತ್ರಿಯಾಗಲು ಅವರಲ್ಲೇ ಗುದ್ದಾಟ ಇದೆ.

ಸಿಎಂ ಆಗಲು ಸಾವಿರ ಕೋಟಿ ಸಂಗ್ರಹಿಸಿದ್ದಾರೆ ಎಂದು ನಾನು ಎಲ್ಲಿಯಾದರೂ ಹೇಳಿದ್ದೇನಾ? ನಮ್ಮ ಪಕ್ಷದವರ ವಿರುದ್ಧ ಮಾತನಾಡಿದ್ದೇನೆ ಎಂದು ವರದಿ ಮಾಡುತ್ತೀರಿ. ನಾನು ಎಲ್ಲಿಯಾದರೂ ಹಾಗೆ ಮಾತನಾಡಿದ್ದೇನಾ, ಹೇಳಿದ್ದೇನಾ? ಮಾಧ್ಯಮದವರು, ಪೊಲೀಸರು ಹಾಕುವ ಕೇಸ್‌ಗಳನ್ನು ನೋಡಿದರೆ ನಾನು ಜೈಲಿನಲ್ಲಿ ಕಾಯಂ ಇರಬೇಕು. ನ್ಯಾಯಾಲಯಗಳು ಇವೆ ಎಂದು ನಾನು ಉಳಿದಿದ್ದೇನೆ. ಇಲ್ಲವಾದರೆ, ನಾನೂ ಲಾರೆನ್ಸ್‌ ಬಿಷ್ಣೋಯಿ ಆಗಿರಬೇಕಿತ್ತು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next