Advertisement

ಗೃಹ ಸಚಿವನಾಗಿ ನನಗೂ ಇತಿಮಿತಿ ಇವೆ: ಸಚಿವ ಆರಗ ಜ್ಞಾನೇಂದ್ರ

12:27 AM Jul 10, 2022 | Team Udayavani |

ಶಿವಮೊಗ್ಗ: ಹರ್ಷ ಕುಟುಂಬದವರ ಆಕ್ರೋಶದ ಬಗ್ಗೆ ಮಾತನಾಡುವುದಿಲ್ಲ. ಆದರೆ ಹರ್ಷ ಹತ್ಯೆ ಆರೋಪಿಗಳು ಮೊಬೈಲ್‌ ಬಳಸಿರುವ ಕುರಿತು ಎಫ್‌ಐಆರ್‌ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

Advertisement

ಮಾಧ್ಯಮದ ಜತೆ ಮಾತ ನಾಡಿದ ಅವರು, ಗೃಹ ಸಚಿವನಾಗಿ ನನಗೂ ಇತಿಮಿತಿಗಳಿವೆ. ಅವರು ಕೇಳುವ ಎಲ್ಲ ವಿಷಯಗಳಿಗೂ ಉತ್ತರಿಸಲಾಗದು. ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಸಹಿತ ಎಲ್ಲರೂ ನನ್ನ ರಾಜೀನಾಮೆ ಕೇಳುವುದು ಸಹಜ. ಏನೇ ಆದರೂ ನಾನು ಹರ್ಷನ ಕುಟುಂಬದ ಜತೆಗಿದ್ದೇನೆ. ಹರ್ಷ ಕುಟುಂಬದವರು ನಮ್ಮ ಬಳಿ ಮಾತನಾಡಿದಾಗ ಸಮಾಧಾನವಾಗಿಯೇ ಪ್ರತಿಕ್ರಿಯಿಸಿ ದ್ದೇನೆ. ಅವರು ಶ್ರೀರಾಮ ಸೇನೆಯ 20ಕ್ಕೂ ಹೆಚ್ಚು ಕಾರ್ಯಕರ್ತ ರೊಂದಿಗೆ ಬಂದಿದ್ದರು. ಅವರಿಗೂ ಹರ್ಷನ ಸಹೋದರಿಯ ವರ್ತನೆಯಿಂದ ಬೇಸರವಾಗಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next