Advertisement

ಇಂದು ಅಪ್ಪು ಪುಣ್ಯ ಸ್ಮರಣೆ : ಅಮಿತಾಬ್ ಬಚ್ಚನ್,  ರಜನಿಕಾಂತ್ ಭಾಗಿಯಾಗುವ ಸಾಧ್ಯತೆ

08:08 AM Nov 08, 2021 | Team Udayavani |

ಅಪ್ಪು ನಮ್ಮನ್ನಗಲಿ ಇಂದಿಗೆ 11 ದಿನ. ರಾಜ್ ಕುಟುಂಬದಲ್ಲಿ ದುಃಖದ ವಾರಾವರಣ. ಇದರ ನಡುವೆ ದೊಡ್ಮನೆ ಕುಟುಂಬದಿಂದ ಪುನೀತ್ ರಾ‍ಜ್ ಕುಮಾರ್ ಅವರಿಗೆ 11ನೇ ದಿನದ ಕಾರ್ಯವನ್ನು ಇಂದು ನಡೆಸಲಾಗುತ್ತಿದೆ.

Advertisement

ಇಂದು ಪರಮಾತ್ಮನ ಪುಣ್ಯ ಸ್ಮರಣೆ ಇದ್ದು, ಕಾರ್ಯದಲ್ಲಿ ಕೇವಲ ರಾಜ್ ಕುಟುಂಬಸ್ತರು, ಚಿತ್ರರಂಗದ ಗಣ್ಯರು ಮತ್ತು ಹತ್ತಿರದ ಸಂಬಂಧಿಗಳು ಮಾತ್ರ ಭಾಗಿಯಾಗುವ ಸಾಧ್ಯತೆ ಇದೆ. ಅಪ್ಪು ನೋಡಲು ದಿನವಿಡೀ ಅಭಿಮಾನಿಗಳು ಧಾವಿಸಿ ಬರ್ತಿದ್ದಾರೆ. ರಾಜಕುಮಾರ ನಮ್ಮನ್ನಗಲಿ ಇಂದಿಗೆ 11 ದಿನವಾಗ್ತಿದ್ದು, ಈ ಸಂದರ್ಭದಲ್ಲಿ ದೊಡ್ಮನೆ ಕುಟುಂಬ ಪುಣ್ಯಸ್ಮರಣೆ ನಡೆಸ್ತಿದೆ.

ದೊಡ್ಮನೆ ಕುಟುಂಬ ಸಂಪ್ರದಾಯದಂತೆ ಸದಾಶಿವನಗರದಲ್ಲಿರುವ ಅಪ್ಪು ನಿವಾಸದಲ್ಲಿ 11ನೇ ದಿನ ಸ್ಮರಣೆಯನ್ನು ಹಮ್ಮಿಕೊಂಡಿದೆ. ಮತ್ತೊಂದು ವಿಚಾರ ಅಂದ್ರೆ ಈ ಕಾರ್ಯಕ್ಕೆ ಚಿತ್ರರಂಗದ ಗಣ್ಯರಾದ ರಜನಿಕಾಂತ್​, ಅಮಿತಾಬಚ್ಚನ್ ಸೇರಿದಂತೆ ಸುಮಾರು 1,500 ಜನ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಮನೆಯ ಮುಂಭಾಗದಲ್ಲಿ ಈಗಾಗಲೇ ಬೃಹತ್ತಾದ ಪೆಂಡಾಲ್​ ವ್ಯವಸ್ಥೆ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next