Advertisement

ವಿಕ್ಟೋರಿಯನ್‌ ಸಂಸತ್‌ನಲ್ಲಿ ಪುತ್ತಿಗೆ ಶ್ರೀಗಳ ಲೋಕಕಲ್ಯಾಣ ಕಾರ್ಯಕ್ಕೆ ಮೆಚ್ಚುಗೆ

11:18 PM Feb 19, 2020 | Team Udayavani |

ಉಡುಪಿ: ಉಡುಪಿಯ ಅಷ್ಟ ಮಠಗಳಲ್ಲಿ ಒಂದಾದ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರ ದಣಿವರಿಯದ ಸಾಮಾ ಜಿಕ, ಧಾರ್ಮಿಕ ಕಾರ್ಯಕ್ಕೆ ಆಸ್ಟ್ರೇಲಿಯಾದ ವಿಕ್ಟೋರಿಯನ್‌ ಸಂಸತ್‌ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ವಿಶ್ವಶಾಂತಿ ಮತ್ತು ಸಾಮರಸ್ಯಕ್ಕಾಗಿ ಆಸ್ಟ್ರೇಲಿ ಯಾದಲ್ಲಿ ಸ್ಥಾಪಿಸಲಾದ ಶ್ರೀ ವೆಂಕಟಕೃಷ್ಣ ವೃಂದಾವನ ಸಂಸ್ಥೆಯಿಂದ ಇತ್ತೀಚೆಗೆ ನೆರ ವೇರಿಸಿದ್ದ ಶ್ರೀನಿವಾಸ ಕಲ್ಯಾಣೋತ್ಸವ, ಭಗವ ದ್ಗೀತೆಯಲ್ಲಿರುವ ದೈವಿಕ ಬೋಧನೆಗಳ ಮೂಲಕ ವಿವಿಧ ಸಮುದಾಯಗಳಲ್ಲಿರುವ ಭಿನ್ನಾಭಿಪ್ರಾಯಗಳನ್ನು ಹೋಗಲಾಡಿಸಿ ಒಗ್ಗೂ ಡಿಸುವ ಹಾಗೂ ವಿಶ್ವದಾದ್ಯಂತ ಮಾನವ ಕುಲದ ಶಾಂತಿಯುತ ಉಳಿವಿಗಾಗಿ, ಸಮಾಜ ದಲ್ಲಿ ಸ್ಥಿರವಾದ ಕ್ರಮಕ್ಕಾಗಿ ಶ್ರೀಗಳು ನಿರಂತರ ಕೆಲಸ ಮಾಡುತ್ತಿದ್ದಾರೆ.

ಶ್ರೀಗಳ ಕಲ್ಯಾಣ ಕಾರ್ಯ, ಅವರು ನಡೆಸುತ್ತಿರುವ ಸಾಮಾಜಿಕ, ಆಧ್ಯಾತ್ಮಿಕ ಕಾರ್ಯಗಳು, ಅವರ ಗುರಿ ಮತ್ತು ಧ್ಯೇಯ ಗಳನ್ನು ಹಾಗೂ ಎಸ್‌ವಿಕೆಬಿ ಸಂಸ್ಥೆಯ ಮೂಲಕ ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ನಡೆದ ಕಾಡ್ಗಿಚ್ಚಿನ ಮಹಾದುರಂತದಲ್ಲಿ ಭಾರತೀಯ ಸಮುದಾಯ ಸೇವೆಯನ್ನೂ ವಿಕ್ಟೋರಿಯನ್‌ ಸಂಸತ್ತಿನಲ್ಲಿ ಆಸ್ಟ್ರೇಲಿಯಾದ ರಕ್ಷಣಾ ಮತ್ತು ಸಮುದಾಯ ಸಂಸ್ಕೃತಿ ಸಚಿವ ಎನ್ವರ್‌ ಎರ್ಡೊಗನ್‌ ಅವರು ಪ್ರಸ್ತಾಪಿಸಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಸಾಗರೋತ್ತರ ಸಂಯೋಜಕ ಪ್ರಸನ್ನ ಆಚಾರ್ಯ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next