Advertisement

ಹೈಕೋರ್ಟ್‌ಗೆ ಐವರು ನ್ಯಾಯಾಧೀಶರ ನೇಮಕ

12:07 AM May 01, 2020 | Sriram |

ಬೆಂಗಳೂರು: ರಾಜ್ಯದ ಐವರು ಜಿಲ್ಲಾ ನ್ಯಾಯಾಧೀಶರನ್ನು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯ ಮೂರ್ತಿಗಳನ್ನಾಗಿ ನೇಮಕ ಮಾಡಿ ಕೇಂದ್ರ ಆದೇಶ ಹೊರಡಿಸಿದೆ.

Advertisement

ನ್ಯಾಯಾಧೀಶರಾದ ಶಿವಶಂಕರ ಅಮರಣ್ಣವರ, ಎಂ.ಗಣೇಶಯ್ಯ ಉಮಾ, ವೇದವ್ಯಾಸಾಚಾರ ಶ್ರೀಶಾನಂದ, ಹಂಚಾಟೆ ಸಂಜೀವ ಕುಮಾರ್‌ ಮತ್ತು ಪದ್ಮರಾಜ ನೇಮ ಚಂದ್ರ ದೇಸಾಯಿ ಅವರನ್ನು ಹೈಕೋರ್ಟ್‌ ಹೆಚ್ಚುವರಿ ನ್ಯಾಯ ಮೂರ್ತಿಗಳಾಗಿ ನೇಮಕ ಮಾಡಿ ರಾಷ್ಟ್ರಪತಿ ಆದೇಶಾನುಸಾರ ಕೇಂದ್ರ ಕಾನೂನು ಸಚಿವಾಲಯ ಅಧಿ ಸೂಚನೆ ಹೊರಡಿಸಿದೆ. ಐವರು ನ್ಯಾಯಾ ಧೀಶರನ್ನು ಹೈಕೋರ್ಟ್‌ ನ್ಯಾಯ ಮೂರ್ತಿಗಳಾಗಿ ನೇಮಕ ಮಾಡು ವಂತೆ ಕೇಂದ್ರ ಸರಕಾರಕ್ಕೆ ಸುಪ್ರೀಂ ಕೋರ್ಟ್‌ ಕೊಲಿಜಿಯಂ ಎ.20ರಂದು ಶಿಫಾರಸು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next