Advertisement

ಜಿಲ್ಲೆಗೊಂದು ಹಾಸ್ಟೆಲ್‌ಗೆ ಮನವಿ

03:17 PM May 03, 2022 | Team Udayavani |

ಬೀದರ: ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯದ ಪ್ರತಿ ಜಿಲ್ಲೆಗೊಂದು ವೀರಶೈವ ಲಿಂಗಾಯತ ಹಾಸ್ಟೆಲ್‌ ನಿರ್ಮಿಸಬೇಕು ಎಂದು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್‌. ಪರಮಶಿವಯ್ಯ ಅವರಿಗೆ ಮನವಿ ಮಾಡಿದರು.

Advertisement

ಬೆಂಗಳೂರಿನಲ್ಲಿ ಅವರನ್ನು ಭೇಟಿ ಮಾಡಿದ ಮೋರ್ಚಾ ನಗರ ಅಧ್ಯಕ್ಷ ಅಂಬರೀಷ್‌ ಬಟನಾಪುರೆ, ಪ್ರಮುಖರಾದ ವೀರೇಶ ಸ್ವಾಮಿ, ಬಸವ ಮೂಲಗೆ ಹಾಗೂ ಆಕಾಶ ಮಮದಾಪುರೆ ಅವರು, ಹಾಸ್ಟೆಲ್‌ ನಿರ್ಮಾಣದಿಂದ ವೀರಶೈವ ಲಿಂಗಾಯತ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿಗೆ ನೆರವಾಗಲಿದೆ ಎಂದು ಮನವರಿಕೆ ಮಾಡಿದರು.

ತಮ್ಮ ಮನವಿಗೆ ಪರಮಶಿವಯ್ಯ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಅಂಬರೀಶ್‌ ಬಟನಾಪುರೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next