Advertisement

ಕೆಜಿಎಫ್ 2 ಚಿತ್ರೀಕರಣ ತಡೆ ತೆರವಿಗಾಗಿ ಕೋರ್ಟ್‌ಗೆ ಮನವಿ

11:18 PM Aug 29, 2019 | Lakshmi GovindaRaj |

ಕೆಜಿಎಫ್: ಚಿತ್ರೀಕರಣಕ್ಕೆ ನೀಡಿರುವ ತಡೆಯಾಜ್ಞೆ ತೆರವು ಮಾಡಬೇಕು ಎಂದು ಕೆಜಿಎಫ್ -2 ಚಿತ್ರದ ತಂಡ ಸ್ಥಳೀಯ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ವಿಚಾರಣೆಯನ್ನು ಆ.31ಕ್ಕೆ ನಿಗದಿಪಡಿಸಲಾಗಿದೆ. ಜೆಎಂಎಫ್ಸಿ ನ್ಯಾಯಾಧೀಶ ಕಿರಣ್‌ ವಿಚಾರಣೆ ನಡೆಸುತ್ತಿದ್ದಾರೆ. ಚಿತ್ರೀಕರಣದಿಂದ ಪರಿಸರಕ್ಕೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ನ್ಯಾಯಾಲಯದ ಮೆಟ್ಟಿಲೇರಿದ್ದರು.

Advertisement

ಈ ಕುರಿತು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಇತ್ತೀಚೆಗೆ ತಡೆಯಾಜ್ಞೆ ನೀಡಿತ್ತು. ಈ ಪ್ರಯುಕ್ತ ಚಿತ್ರೀಕರಣ ಮಂಗಳವಾರದಿಂದ ಸ್ಥಗಿತಗೊಳಿ ಸಿತ್ತು. ಈ ಹಿನ್ನೆಲೆಯಲ್ಲಿ ಚಿತ್ರ ತಂಡದ ಪರ ವಕೀಲರು ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಅರ್ಜಿ ಸಲ್ಲಿಸಿ, ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

ಆದರೆ, ತಡೆಯಾಜ್ಞೆ ತಂದಿದ್ದ ವಕೀಲರು, ಇನ್ನೂ ಹೆಚ್ಚಿನ ಸಮಯಾವಾಕಾಶ ಬೇಕೆಂದು ಮನವಿ ಮಾಡಿದರು. ಶುಕ್ರವಾರವೇ ವಿಚಾರಣೆ ನಡೆಸೋಣ ಎಂದು ನ್ಯಾಯಾಧೀಶರು ಹೇಳಿದರು. ಆದರೆ, ತಾವು ಊರಲ್ಲಿ ಇರದ ಕಾರಣ ಸಾಧ್ಯವಿಲ್ಲ ಎಂದು ವಕೀಲರು ಹೇಳಿದಾಗ, ಶನಿವಾರಕ್ಕೆ ವಿಚಾರಣೆಯನ್ನು ನಡೆಸಲು ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next