Advertisement

ಕುರುಬ ಅಭ್ಯರ್ಥಿಗಳ ಬೆಂಬಲಿಸಲು ಮನವಿ

10:35 PM Nov 25, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಉಪ ಚುನಾವಣೆಯಲ್ಲಿ ಹಿರಿಯ ರಾಜಕಾರಣಿ ಕಾಗಿನೆಲೆ ಗುರು ಪೀಠದ ಸಂಸ್ಥಾಪಕ ಎಚ್‌. ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಬೈರತಿ ಬಸವರಾಜ ಅವರನ್ನು ಬೆಂಬಲಿಸುವಂತೆ ಅಹಿಂದ ಅಧ್ಯಕ್ಷ ಕೆ.ಮುಕುಡಪ್ಪ ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಕುರುಬ ಜನಾಂಗ ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಹಿಂದುಳಿದ ಸಮಾಜವಾಗಿದೆ.

Advertisement

ಹಿಂದಿನ ಸರ್ಕಾರದಲ್ಲಿ ಕುರುಬ ಜನಾಂಗದ ಅಭಿವೃದ್ಧಿ ನಿರೀಕ್ಷಿತ ಮಟ್ಟದಲ್ಲಿ ಆಗಿಲ್ಲ. ಹೀಗಾಗಿ, ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಎಚ್‌. ವಿಶ್ವನಾಥ್‌, ಎಂಟಿಬಿ ನಾಗರಾಜ್‌, ಬೈರತಿ ಬಸವರಾಜ್‌ ಗೆದ್ದರೆ ಅವರನ್ನ ಮಂತ್ರಿ ಮಾಡುವುದಾಗಿ ಭರವಸೆ ನೀಡಿ¨ªಾರೆ. ಅವರನ್ನ ಮಂತ್ರಿಗಳನ್ನಾಗಿ ಮಾಡಿದರೆ ಒಟ್ಟು ಐದು ಜನ ನಮ್ಮ ಸಮಾಜದ ಮಂತ್ರಿಗಳಾಗಿರುತ್ತಾರೆಂದು ಹೇಳಿದರು. ನಿವೃತ್ತ ಐಎಎಸ್‌ ಅಧಿಕಾರಿ ಎಸ್‌.ಪುಟ್ಟಸ್ವಾಮಿ, ಕನಕಶ್ರೀ ಕ್ರೆಡಿಟ್‌ ಸೊಸೈಟಿ ಅಧ್ಯಕ್ಷ ಟಿ.ಬಿ.ಬಳಗಾವಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next