Advertisement

ಕನ್ನಡ ಶಾಲೆಗಳ ಉಳಿಸಲು ಒತ್ತಾಯಿಸಿ ಮನವಿ

01:25 PM Feb 19, 2022 | Team Udayavani |

ರಾಯಚೂರು: ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕನ್ನಡ ಶಾಲೆಗಳ ಉಳಿವಿಗಾಗಿ ತುಮಕೂರಿನ ರಾಹುಲ್‌ ಎಸ್‌ ಸೈಕಲ್‌ ನಲ್ಲಿ ರಾಜ್ಯ ಪ್ರವಾಸ ಕೈಗೊಂಡಿದ್ದು, ಈ ಕುರಿತು ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ರಾಜ್ಯದಲ್ಲಿ ಕನ್ನಡ ಶಾಲೆಗಳ ಅಸ್ತಿತ್ವಕ್ಕೆ ಧಕ್ಕೆ ಬರುತ್ತಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಹಾವಳಿ ಹೆಚ್ಚಾಗುತ್ತಿದ್ದು, ಕನ್ನಡ ಶಾಲೆಗಳು ಅಳಿವಿನ ಅಂಚಿಗೆ ತಲುಪಿವೆ. ಅನೇಕ ಶಾಲೆಗಳಿಗೆ ಸರ್ಕಾರದಿಂದ ಬರುವ ಅನುದಾನ ಸಕಾಲಕ್ಕೆ ಬರದೆ ಶಾಲಾಭಿವೃದ್ಧಿ ಕುಂಠಿತಗೊಂಡಿದೆ ಎಂದು ಸಮಸ್ಯೆ ವಿವರಿಸಿದರು.

ರಾಜ್ಯದ ಅನೇಕ ಶಾಲೆಗಳಿಗೆ ಶಿಕ್ಷಕರ ಕೊರತೆ ಇದೆ. ಶಾಲಾ ಕೊಠಡಿ, ಶೌಚಗೃಹ ಇಲ್ಲ. ಕೂಡಲೇ ಸರ್ಕಾರಿ ಶಾಲೆಗಳಿಗೆ ಅಗತ್ಯ ಅನುದಾನ ಕಲ್ಪಿಸಬೇಕು ಹಾಗೂ ಮುಚ್ಚುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.

ವಿವಿಧ ಸಂಘಟನೆಗಳ ಮುಖಂಡರಾದ ಎಸ್‌. ಶಿವಕುಮಾರ ಯಾದವ್‌, ಸದಸ್ಯರಾದ ಮುರಳಿ ಕಟ್ಟಿಮನಿ, ಜಿಯಾ ಉಲ್‌ ಹಕ್‌ ಸೌದಾಗರ, ಜಾಫರ್‌ ಶರೀಫ್‌, ರಘು, ವೆಂಕಟೇಶ ನಾಯಕ, ಸುರೇಶ, ಶ್ರೀಕಾಂತ, ಸುರೇಶ ಮಡಿವಾಳ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next