Advertisement

ಧ್ವನಿವರ್ಧಕ ತೆರವಿಗೆ ಮನವಿ

01:19 PM Apr 14, 2022 | Team Udayavani |

ಬೀದರ: ಜಿಲ್ಲೆಯಲ್ಲಿ ಶಬ್ದ ಮಾಲಿನ್ಯ ಮತ್ತು ಅನಧಿಕೃತ ಧ್ವನಿ ವರ್ಧಕ ಮೇಲೆ ಕ್ರಮ ಕೈಗೊಳ್ಳುವಂತೆ ಶ್ರೀರಾಮ ಸೇನೆ ಜಿಲ್ಲಾ ಘಟಕ ಆಗ್ರಹಿಸಿದೆ.

Advertisement

ಈ ಕುರಿತು ಸೇನೆ ಜಿಲ್ಲಾಧ್ಯಕ್ಷ ವೀರಶೆಟ್ಟಿ ಖ್ಯಾಮಾ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸುಪ್ರಿಂ ಕೋರ್ಟ್‌ ಸೇರಿದಂತೆ ಹಲವು ಕೋರ್ಟ್‌ಗಳು ಅನಧಿಕೃತ ಮೈಕ್‌ ಸೇರಿದಂತೆ ಶಬ್ದ ಮಾಲಿನ್ಯ ತಡೆಯಲು ಆದೇಶ ನೀಡಿದರೂ ಜಿಲ್ಲೆಯಲ್ಲಿ ಇದರ ಪಾಲನೆ ಕಟ್ಟುನಿಟ್ಟಾಗಿ ಪಾಲಿಸದಿರುವುದು ಖಂಡನೀಯ ಎಂದಿದ್ದಾರೆ.

ಸಂಘಟನೆಯಿಂದ ಈ ಹಿಂದೆ ತಹಶೀಲ್ದಾರರು ಮತ್ತು ಹಿರಿಯ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಜರುಗಿಸದಿರುವುದು ನ್ಯಾಯಾಂಗ ನಿಂದನೆ ಮತ್ತು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗುತ್ತದೆ. 15 ದಿನಗಳಲ್ಲಿ ಈ ಸಮಸ್ಯೆಗೆ ಪರಿಹಾರ ಸಿಗದಿದ್ದರೆ ಉಗ್ರ ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.

ಈ ವೇಳೆ ಶಂಕರ ಖ್ಯಾಮಾ, ಆಕಾಶ ಕೊಡಗೆ, ಪ್ರತೀಕ ಠಾಕೂರ, ಗಣಪತಿ ಮೂಲಗೆ, ಸಾಯಿ ಖಂದಾರೆ, ವಿನೋದ ಮನ್ನಳ್ಳಿ, ಅಭಿನಯ ಮತ್ತು ಡಾ| ಸತೀಶ ಪಾಟೀಲ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next