Advertisement

Arasalu: ಅದೇ ಸ್ಥಳದಲ್ಲಿ ಬಿತ್ತು ಮತ್ತೊಂದು ಮರ; ರೈಲು ಸಂಚಾರದಲ್ಲಿ ಮತ್ತೆ ವ್ಯತ್ಯಯ

05:41 PM Jul 18, 2024 | keerthan |

ಶಿವಮೊಗ್ಗ: ಅರಸಾಳು ಸಮೀಪದ ಬಟಾಣಿಜೆಡ್ಡು ಬಳಿ ರಾತ್ರಿ ಮರವೊಂದು ಬಿದ್ದು ರೈಲು ಸಂಚಾರಕ್ಕೆ ತೊಡಕಾಗಿತ್ತು. ಈಗ ಅದೇ ಜಾಗದಿಂದ ಕೆಲವೇ ಮೀಟರ್ ದೂರದಲ್ಲಿ ಮತ್ತೊಂದು ಮರ ರೈಲ್ವೆ ಹಳಿಗಳ ಮೇಲೆ ಬಿದ್ದಿದ್ದು, ಮತ್ತೆ ರೈಲು ಸಂಚಾರದಲ್ಲಿ ತೊಡಕಾಗಿದೆ.

Advertisement

ಅರಸಾಳು ರೈಲ್ವೆ ನಿಲ್ದಾಣದಿಂದ ಒಂದು ಕಿ.ಮೀ ದೂರದಲ್ಲಿರುವ ಬಟಾಣಿಜೆಡ್ಡು ಬಳಿ ಬುಧವಾರ ರಾತ್ರಿ ಗಾಳಿ, ಮಳೆಗೆ ಮರ ಬಿದ್ದಿತ್ತು. ಮರ ಬಿದ್ದ ರಭಸಕ್ಕೆ ವಿದ್ಯುತ್ ಲೈನ್ ಕೂಡ ತುಂಡಾಗಿತ್ತು. ಹಳಿ ಮೇಲೆ ಮರ ಬಿದ್ದಿದ್ದನ್ನು ಗಮನಿಸಿದ ಲೋಕೋ ಪೈಲೆಟ್ ರೈಲು ನಿಲುಗಡೆ ಮಾಡಿದ್ದರು. ತಕ್ಷಣ ರೈಲ್ವೆ ಸಿಬ್ಬಂದಿ ಮರವನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಇದರಿಂದ ತಾಳಗುಪ್ಪದಿಂದ ಬೆಂಗಳೂರಿಗೆ ಹೊರಟಿದ್ದು ರೈಲು ಒಂದೂವರೆ ಗಂಟೆ ಕಾಲ ತಡವಾಯಿತು. ಬೆಳಗ್ಗೆ 7.15ಕ್ಕೆ ಶಿವಮೊಗ್ಗ ತಲುಪಬೇಕಿದ್ದ ರೈಲು 9 ಗಂಟೆಗೆ ಶಿವಮೊಗ್ಗಕ್ಕೆ ಬಂದಿತ್ತು.

ಈಗ ಅದೇ ಪ್ರದೇಶದಲ್ಲಿ ಮತ್ತೊಂದು ಮರ ಬಿದ್ದಿದ್ದು ಶಿವಮೊಗ್ಗದಿಂದ – ತಾಳಗುಪ್ಪಕ್ಕೆ ಹೋಗುತ್ತಿದ್ದ ಪ್ಯಾಸೆಂಜರ್ ರೈಲು ನಿಂತಲ್ಲೇ ನಿಂತಿದೆ. ಮೈಸೂರು – ತಾಳಗುಪ್ಪ ರೈಲು ಕೆಲವೇ ನಿಮಿಷಗಳ ಹಿಂದೆ ಹೋಗಿದ್ದರಿಂದ ಬಚಾವ್ ಆಗಿದೆ. ತೆರವು ಕಾರ್ಯಾಚರಣೆ ನಡೆಯುತ್ತಿದ್ದು ಪ್ರಯಾಣಿಕರು ಹೈರಾಣಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next