Advertisement

ಕಾಂಗ್ರೆಸ್‌ ಪಕ್ಷದ ಕೊಲ್ಲಂ ಮಾಜಿ ಸಂಸದ ಎಸ್‌ ಕೃಷ್ಣ ಕುಮಾರ್‌ ಬಿಜೆಪಿಗೆ ಸೇರ್ಪಡೆ

09:17 AM Apr 21, 2019 | Team Udayavani |

ಹೊಸದಿಲ್ಲಿ : ಕಾಂಗ್ರೆಸ್‌ ಪಕ್ಷಕ್ಕೆ ಒದಗಿರುವ ಇನ್ನೊಂದು ಹಿನ್ನಡೆ ಎಂಬ ರೀತಿಯಲ್ಲಿ ಆ ಪಕ್ಷದ ಕೊಲ್ಲಂ ಕ್ಷೇತ್ರದ ಮಾಜಿ ಸಂಸದ ಎಸ್‌ ಕೃಷ್ಣ ಕುಮಾರ್‌ ಅವರಿಂದು ಭಾರತೀಯ ಜನತಾ ಪಕ್ಷ ಸೇರಿದರು.

Advertisement

ರಾಷ್ಟ್ರ ರಾಜಧಾನಿಯಲ್ಲಿ,  ಬಿಜೆಪಿ ನಾಯಕರ ಸಮ್ಮುಖದಲ್ಲಿ, ಕುಮಾರ್‌ ಅವರನ್ನು ಕೇಸರಿ ಪಕ್ಷಕ್ಕೆ ಸೇರಿಸಿಕೊಳ್ಳಲಾಯಿತು.

ಕುಮಾರ್‌ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಬಿಜೆಪಿ ನಾಯಕ ಶಹನವಾಜ್‌ ಹುಸೇನ್‌ ಅವರು, ಕುಮಾರ್‌ ಅವರ ಸೇರ್ಪಡೆಯಿಂದ ಕೇಸರಿ ಪಕ್ಷಕ್ಕೆ ಇನ್ನಷ್ಟು ಬಲ ಬಂದಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next