Advertisement

ಮಡಿವಂತಿಕೆಗೆ ಮತ್ತೊಂದು ಹೆಸರೇ ಮಡಿವಾಳ ಸಮಾಜ; ಶಾಸಕ ಬಸವರಾಜ

05:47 PM Mar 01, 2023 | Team Udayavani |

ಕನಕಗಿರಿ: ಕಾಯಕ, ನಿಷ್ಠೆ, ಪ್ರಾಮಾಣಿಕತೆಯ ಜೊತೆಗೆ ಸಮಾಜದಲ್ಲಿ ಮಡಿವಂತಿಕೆಗೆ ಮತ್ತೊಂದು ಹೆಸರೇ ಮಡಿವಾಳ ಸಮಾಜವಾಗಿದೆ ಎಂದು ಶಾಸಕ ಬಸವರಾಜ ದಢೇಸುಗೂರು ಹೇಳಿದರು.

Advertisement

ಅವರು ಇಲ್ಲಿನ ನವಲಿ ರಸ್ತೆಯಲ್ಲಿ ನಡೆದ ತಾಲೂಕು ಮಟ್ಟದ ಮಡಿವಾಳ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಡಿವಾಳ ಸಮಾಜದವರು ಆಸೆ-ಆಕಾಂಕ್ಷೆಗಳಿಗೆ ಬಲಿಯಾಗದೆ ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಸಲ್ಲಿಸುತ್ತಿದ್ದಾರೆ. ಬೇರೆ ಧರ್ಮಗಳ ಸ್ವಚ್ಚತೆಯ ಮಡಿಯನ್ನು ಕಾಪಾಡಲು ಮಡಿವಾಳ ಸಮಾಜದ ಕುಲ ಕಸುಬು ಅವಶ್ಯಕತೆ ಇದೆ.

ಈ ಕಸಬನ್ನು ನಂಬಿ ಕಡಿಮೆ ಆದಾಯದ ಮೂಲಕ ಜೀವನ ನಡೆಸುತ್ತಿದ್ದಾರೆ. ಮಡಿವಾಳ ಸಮಾಜದ ಆರ್ಥಿಕ ಬಲವರ್ದನೆಯನ್ನು ಬಲಪಡಿಸಲು ಬಿಜೆಪಿ ಸರ್ಕಾರ ಮಡಿವಾಳ ಮಾಚಿದೇವ ನಿಗಮವನ್ನು ಸ್ಥಾಪನೆ ಮಾಡುವ ನಿಟ್ಟಿನಲ್ಲಿ ಪ್ರತಿಯೊಂದು ಸರ್ಕಾರಿ ಸೌಲಭ್ಯಗಳನ್ನು ಪಡೆದುಕೊಂಡು ಶಿಕ್ಷಣ ಪಡೆದು ಸಮಾಜದಲ್ಲಿ ಮುಖ್ಯ ಪಾತ್ರ ವಹಿಸಬೇಕು ಎಂದು ಹೇಳಿದರು.

ಮಡಿವಾಳ ಮಾಚಿದೇವ ಸಂಘದ ಜಿಲ್ಲಾಧ್ಯಕ್ಷ ದುರುಗೇಶ ಮಡಿವಾಳ ಮಾತನಾಡಿ, 15 ವರ್ಷಗಳಿಂದಲೂ ಮಡಿವಾಳ ಸಮಾಜವನ್ನು ಪರಿಶಿಷ್ಟ ಜಾತಿಗೆ ಸೇರಿಸುವಲ್ಲಿ ಆಡಳಿತ ಪಕ್ಷಗಳು ವಿಫಲವಾಗಿವೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಹಿಂದುಳಿದ ಮಡಿವಾಳ ಸಮಾಜ ಎಸ್‌ಸಿ ಸಮುದಾಯಕ್ಕೆ ಸೇರಲು ಸೂಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತ ಇರುವ ಬಿಜೆಪಿ ಸರ್ಕಾರ ಮಡಿವಾಳ ಸಮಾಜವನ್ನು ಎಸ್‌ಸಿಗೆ ಸೇರಿಸಲು ಮೀನಾಮೇಷ ಎಣಿಸುತ್ತಿದೆ ಎಂದರು.

ಚಿತ್ರದುರ್ಗದ ಮಡಿವಾಳ ಸಮಾಜದ ಡಾ| ಬಸವ ಮಾಚಿದೇವ ಸ್ವಾಮಿ ಮಾತನಾಡಿ, ಮಡಿವಾಳ ಸಮಾಜವು ಶೈಕ್ಷಣಿಕ, ಆರ್ಥಿಕ, ಸಾಮಾಜಿಕವಾಗಿ ಪ್ರಗತಿ ಸಾಧಿಸಬೇಕೆಂದರೆ ಉತ್ತಮವಾದ ಶಿಕ್ಷಣ ಪಡೆದುಕೊಂಡು ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಗೈಯಬೇಕು. ಮಡಿವಾಳ ಸಮಾಜ ಹಲವಾರು ಸವಾಲುಗಳನ್ನು ಎದುರಿಸುತ್ತಿದ್ದು, ಜನ ಜೀವನ ನಡೆಸಲು ಕಷ್ಟ ಪಡುತ್ತಿದ್ದಾರೆ. ಹಾಗಾಗಿ ಯುವಕರು ದುಶ್ಚಟಗಳಿಂದ ದೂರವಿದ್ದು ಸಾಧನೆ ಮಾಡಬೇಕು ಎಂದರು.

Advertisement

ಉತ್ತರ ಕರ್ನಾಟಕದ ಅಧ್ಯಕ್ಷ ಎಂ.ಕೆ. ಹನುಮಂತಪ್ಪ, ತಾಲೂಕು ಅಧ್ಯಕ್ಷ ನಾಗರಾಜ, ಮುಖಂಡರಾದ ತಿಪ್ಪಣ್ಣ ಮರಕುಂಬಿ, ಹೊನ್ನುರಪ್ಪ ಮಾತನಾಡಿದರು. ರಾಜ್ಯ ದೋಬಿ ಘಾಟ್‌ ಅಧ್ಯಕ್ಷ ಪಂಪಣ್ಣ, ಪಪಂ ಸದಸ್ಯರಾದ ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ, ನೂರಸಾಬ್‌ ಗಟ್ಟಿಗಾಲ, ರಾಚಪ್ಪ ಬ್ಯಾಳಿ, ಕಂಠಿರಂಗ ನಾಯಕ, ಬಿಜೆಪಿ ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ, ಸಮಾಜದರಾದ ಕೊಟ್ರೇಶ ಮಡಿವಾಳ, ತಿಪ್ಪಣ್ಣ ಮಡಿವಾಳ, ಶರಣ ಮಡಿವಾಳ, ರಂಗಪ್ಪ ಮಡಿವಾಳ, ಆನಂದ ಮಡಿವಾಳ ಸೇರಿದಂತೆ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next