Advertisement

ಮೇ 18ಕ್ಕೆ ಇನ್ನೊಂದು ದುಬಾೖ ವಿಮಾನ

02:21 AM May 16, 2020 | Sriram |

ಮಂಗಳೂರು: ದುಬಾೖಯಿಂದ ಕನ್ನಡಿಗರನ್ನು ಹೊತ್ತ ಇನ್ನೊಂದು ವಿಮಾನ ಮೇ 18ರಂದು ಸಂಜೆ 6.30ಕ್ಕೆ ಮಂಗಳೂರಿಗೆ ಆಗಮಿಸಲಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ತಿಳಿಸಿದ್ದಾರೆ.

Advertisement

ವಿಮಾನದಲ್ಲಿ ಎಷ್ಟು ಪ್ರಯಾಣಿಕರಿರುತ್ತಾರೆ ಎಂಬ ನಿಖರ ಮಾಹಿತಿ ದೊರಕಿಲ್ಲ. ದುಬಾೖಯಿಂದ ಪ್ರಥಮ ವಿಮಾನದಲ್ಲಿ ಬಂದ ಪ್ರಯಾಣಿಕರಿಗೆ ಮಂಗಳೂರಿನಲ್ಲಿ ತೊಂದರೆಗಳಾಗಿರುವ ದೂರು ಗಳ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಸೂಚಿಸಲಾಗಿದೆ. ಪ್ರಯಾಣಿಕರು ಕೂಡ ಜಿಲ್ಲಾಡಳಿತಕ್ಕೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಕೋರಿದರು.

ದೋಹಾ, ಮಸ್ಕತ್‌
ವಿಮಾನ ಬೆಂಗಳೂರಿಗೆ
ಮೇ 20 ಮಸ್ಕತ್‌ನಿಂದ ಹಾಗೂ 22ರಂದು ದೋಹಾದಿಂದ ಬೆಂಗಳೂರಿನ ಮೂಲಕ ಮಂಗ ಳೂರಿಗೆ ವಿಮಾನ ಬರುವ ಮಾಹಿತಿಯಿತ್ತು. ಆದರೆ ಸದ್ಯದ ಮಾಹಿತಿ ಪ್ರಕಾರ ಈ ವಿಮಾನಗಳು ಬೆಂಗಳೂರಿಗೆ ಮಾತ್ರ ಬರಲಿವೆ ಎಂದು ಮಂಗಳೂರು ನಿಲ್ದಾಣದ ಮೂಲಗಳು ತಿಳಿಸಿವೆ.

ಕಾರ್ಮಿಕರಿಗೆ ಕಳಪೆ ಅಕ್ಕಿ ಆರೋಪ:ಕೂಲಂಕಷ ಪರಿಶೀಲನೆ
ಝಾರ್ಖಂಡ್‌, ಬಿಹಾರ, ಉತ್ತರ ಪ್ರದೇಶ ಸೇರಿದಂತೆ ತಮ್ಮ ಊರುಗಳಿಗೆ ತೆರಳಲು ಜೋಕಟ್ಟೆ ಪ್ರದೇಶದಲ್ಲಿ ಬೀಡುಬಿಟ್ಟಿದ್ದ ವಲಸೆ ಕಾರ್ಮಿಕರಿಗೆ ನೀಡಲಾದ ಕಳಪೆ ಅಕ್ಕಿ ಇಲಾಖೆಯಿಂದ ಪೂರೈಕೆ ಆಗಿರುವುದಲ್ಲ ಎಂಬ ವರದಿಯನ್ನು ಕಾರ್ಮಿಕ ಇಲಾಖೆ ನೀಡಿದೆ; ಆದ್ದರಿಂದ ಆ ವಿಚಾರದಲ್ಲಿ ಕೂಲಂಕಷ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌ ಅವರು ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕಾರ್ಮಿಕ ಇಲಾಖೆಯು 21,000 ಮಂದಿ ಕಾರ್ಮಿಕರಿಗೆ ಆಹಾರವನ್ನು ಪೂರೈಕೆ ಮಾಡಿದೆ. ಕಳಪೆ ಆಹಾರ ಕುರಿತಂತೆ ನಮಗೆ ದೂರು ಬಂದಿಲ್ಲ. ಕಳಪೆ ಅಕ್ಕಿ ಕುರಿತು ಬಂದಿರುವ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಈಗಾಗಲೇ ದ.ಕ. ಜಿಲ್ಲೆಯಿಂದ ವಿವಿಧ ರಾಜ್ಯಗಳಿಗೆ 12,998 ಮಂದಿ ರೈಲಿನ ಮೂಲಕ ತೆರಳಿದ್ದಾರೆ. ಶುಕ್ರವಾರ ಕೂಡ ಬಿಹಾರ ಮತ್ತು ಝಾರ್ಖಂಡ್‌ಗೆ ರೈಲು ಪ್ರಯಾಣ ಇರಲಿದೆ ಎಂದು ಹೇಳಿದರು.

ಇತರ ರಾಷ್ಟ್ರಗಳಿಗೂ
ವಿಮಾನಕ್ಕೆ ಆಗ್ರಹ
ಕತಾರ್‌, ಬಹ್ರೈನ್‌, ಒಮಾನ್‌, ಕುವೈಟ್‌ ಮೊದಲಾದ ಕೊಲ್ಲಿ ರಾಷ್ಟ್ರಗಳಲ್ಲಿಯೂ ಕರಾವಳಿ ಭಾಗದವರು ಕೋವಿಡ್-19 ಕಾರಣ ದಿಂದ ಸಂಕಷ್ಟದಲ್ಲಿದ್ದು, ಅವರನ್ನು ಕೂಡ ಕರ್ನಾಟಕಕ್ಕೆ ಕರೆತರಲು ವಿಶೇಷ ವಿಮಾನ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ಅನಿವಾಸಿ ಭಾರತೀಯರು ಸರಕಾರವನ್ನು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next