Advertisement

ಅನೂಪ್‌ ಈಗ “ಗಣ’ನಾಯಕ

05:46 AM Feb 10, 2019 | |

ಆರ್‌. ಚಂದ್ರು ನಿರ್ದೇಶನದ “ಲಕ್ಷ್ಮಣ’ ಮತ್ತು ಎಸ್‌. ನಾರಾಯಣ್‌ ನಿರ್ದೇಶನದ “ಪಂಟ’ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನ‌ಲ್ಲಿ ನಾಯಕ ನಟನಾಗಿ ಗುರುತಿಸಿಕೊಂಡಿರುವ, ಹಿರಿಯ ರಾಜಕಾರಣಿ ಹೆಚ್‌.ಎಂ ರೇವಣ್ಣ ಪುತ್ರ ಅನೂಪ್‌ ರೇವಣ್ಣ ಸದ್ದಿಲ್ಲದೆ ತಮ್ಮ ಮೂರನೇ ಚಿತ್ರವನ್ನು ಪ್ರಾರಂಭಿಸಿದ್ದಾರೆ. “ಪಂಟ’ ಚಿತ್ರದ ಬಳಿಕ ಸುಮಾರು ಎರಡು ವರ್ಷ ಗ್ಯಾಪ್‌ ತೆಗೆದುಕೊಂಡಿದ್ದ ಅನೂಪ್‌ ರೇವಣ್ಣ  ಮತ್ತೂಂದು ಆ್ಯಕ್ಷನ್‌ ಚಿತ್ರದ ಮೂಲಕ ಕಂ ಬ್ಯಾಕ್‌ ಆಗುತ್ತಿದ್ದಾರೆ. 

Advertisement

ಅಂದಹಾಗೆ, ಅನೂಪ್‌ ರೇವಣ್ಣ ಇತ್ತೀಚೆಗೆ 25ನೇ ವರ್ಷಕ್ಕೆ ಕಾಲಿಟ್ಟಿದ್ದು, ಇದೇ ಸಂದರ್ಭದಲ್ಲಿ ತಮ್ಮ ಹೊಸ ಚಿತ್ರವನ್ನು ಅನೌನ್ಸ್‌ ಮಾಡಿದ್ದಾರೆ. ಇನ್ನು ಅನೂಪ್‌ ಹೊಸಚಿತ್ರಕ್ಕೆ “ಗಣ’ ಎಂದು ಹೆಸರಿಡಲಾಗಿದ್ದು, ಅವರ ಹುಟ್ಟುಹಬ್ಬದ ದಿನದಂದೇ “ಗಣ’ ಚಿತ್ರದ ಟೈಟಲ್‌ ಅನ್ನು ಲಾಂಚ್‌ ಮಾಡಲಾಗಿದೆ. ಈ ಚಿತ್ರವನ್ನು ಶಿವ ಮಧು ನಿರ್ದೇಶಿಸುತ್ತಿದ್ದು, ಚಿತ್ರದಲ್ಲಿ ಅನೂಪ್‌ ವಿದೇಶದಿಂದ ಹಳ್ಳಿಗೆ ಬಂದು ಬಡ ಜನರಿಗೆ ಸಹಾಯ ಮಾಡೋವ ಶ್ರೀಮಂತ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

“ಗಣ’ ಚಿತ್ರದಲ್ಲಿ ಆ್ಯಕ್ಷನ್‌, ಲವ್‌, ಫ್ಯಾಮಿಲಿ ಸೆಂಟಿಮೆಂಟ್‌ ಹೀಗೆ ಮಾಸ್‌ ಕಮರ್ಷಿಯಲ್‌ ಅಂಶಗಳಿದ್ದು, ಚಿತ್ರದ ಪಾತ್ರಕ್ಕಾಗಿ ಅನೂಪ್‌ ರೇವಣ್ಣ ಕೆಲ ಸಮಯ ಚೈನಾದಲ್ಲಿ ಕುಂಗ್‌ ಫ‌ೂ, ಮಾರ್ಷಲ್‌ ಆರ್ಟ್ಸ್ ತರಬೇತಿಯನ್ನು ಕೂಡ ಪಡೆದುಕೊಂಡು ಬಂದಿದ್ದಾರಂತೆ. ಅಲ್ಲದೆ ಹಲವು ಶಾರ್ಟ್‌ ಫಿಲಂಗಳನ್ನು ಮಾಡಿ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. “ಗಣ’ ಚಿತ್ರವನ್ನು ವತ್ಸಲಾ ರೇವಣ್ಣ ನಿರ್ಮಿಸುತ್ತಿದ್ದು,

ಸದ್ಯ ಚಿತ್ರದ ಸ್ಕ್ರಿಪ್ಟ್ ಕೆಲಸಗಳು ಪೂರ್ಣಗೊಂಡಿದ್ದು, ಚಿತ್ರದ ನಾಯಕಿ, ಇನ್ನಿತರ ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ಅಂತಿಮ ಹಂತದಲ್ಲಿದೆ. ಮುಂದಿನ ಮಾರ್ಚ್‌ ತಿಂಗಳಿನಿಂದ “ಗಣ’ ಚಿತ್ರದ ಚಿತ್ರೀಕರಣ ಆರಂಭವಾಗಲಿದ್ದು, ಚಿತ್ರತಂಡದ ಪ್ಲಾನ್‌ ಪ್ರಕಾರ ಎಲ್ಲವೂ ನಡೆದರೆ, ಇದೇ ವರ್ಷಾಂತ್ಯಕ್ಕೆ ಅನೂಪ್‌ “ಗಣ’ ನಾಯಕನಾಗಿ ತೆರೆಮೇಲೆ ಎಂಟ್ರಿ ಕೊಡೋದು ಪಕ್ಕಾ ಎನ್ನಲಾಗುತ್ತಿದೆ.  

Advertisement

Udayavani is now on Telegram. Click here to join our channel and stay updated with the latest news.

Next