Advertisement

ಅನಾಮಧೇಯ ವ್ಯಕ್ತಿ ಸಾವು-ದೂರು ದಾಖಲು

03:51 PM Jun 01, 2022 | Team Udayavani |

ಬಳ್ಳಾರಿ: ನಗರದ ರೈಲ್ವೆ ಪೋಲಿಸ್‌ ಠಾಣಾ ಸರಹದ್ದಿನ ಹೊಸಪೇಟೆ ಮತ್ತು ಟಿ.ಬಿ.ಡ್ಯಾಂ ನಿಲ್ದಾಣ ಹತ್ತಿರ ರೈಲ್ವೆ ನಂ. 3/6-7 ಗೆ ಚಲಿಸುವ ರೈಲುಗಾಡಿಗೆ ಸುಮಾರು 35 ರಿಂದ 40 ವರ್ಷದ ಅನಾಮಧೇಯ ವ್ಯಕ್ತಿಯು ಆಕಸ್ಮಿಕವಾಗಿ ಸಿಕ್ಕು ಮೃತಪಟ್ಟಿರುವ ಕುರಿತು ಮೇ 31ರಂದು ಪ್ರಕರಣ ದಾಖಲಾಗಿದ್ದು, ಈ ಕುರಿತು ಮೃತ ವಾರಸುದಾರರ ಪತ್ತೆಗಾಗಿ ರೈಲ್ವೆ ಪೋಲಿಸ್‌ ಠಾಣೆಯು ಪ್ರಕಟಣೆ ಹೊರಡಿಸಿದೆ.

Advertisement

ಅನಾಮಧೇಯ ಮೃತ ವ್ಯಕ್ತಿಯ ಸದೃಢ ಮೈಕಟ್ಟು, ಗೋಧಿ ಮೈಬಣ್ಣ, 5.5 ಅಡಿ ಎತ್ತರ, ಸಣ್ಣ ಮೂಗು, ತಲೆಯಲ್ಲಿ ಸುಮಾರು ಎರಡು ಇಂಚು ಕಪ್ಪು ಉದ್ದದ ಕೂದಲು, ಕಪ್ಪು ದಪ್ಪನೆಯ ಮೀಸೆ, ದಪ್ಪ ತುಟಿ, ಆಗಲವಾದ ಹಣೆ, ಸಣ್ಣ ಕಿವಿ, ದಪ್ಪನೆಯ ಕಣ್ಣು ಹುಬ್ಬು ಇರುತ್ತದೆ. ನೀಲಿ ಬಣ್ಣದ ಪುಲ್‌ ಶರ್ಟ್‌ ಮತ್ತು ಕಪ್ಪು ಬಣ್ಣದ ಪ್ಯಾಂಟ್‌ ಧರಿಸಿರುತ್ತಾನೆ.

ಮೃತ ವ್ಯಕ್ತಿಯ ವಾರಸುದಾರರು ಮಾಹಿತಿ ಸಿಕ್ಕಲ್ಲಿ ಬಳ್ಳಾರಿಯ ರೈಲ್ವೆ ಪೊಲೀಸ್‌ ಉಪ ನಿರೀಕ್ಷಕರು ಮೊ.9480802131, ರಾಯಚೂರು ಪೊಲೀಸ್‌ ವೃತ್ತ ನಿರೀಕ್ಷಕರ ಮೊ.9480800471ಗೆ ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next