Advertisement

ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ

12:21 PM Dec 30, 2017 | Team Udayavani |

ಮಹಾನಗರ: ಶ್ರೀ ರಾಮಕೃಷ್ಣ ಮಿಶನ್‌ ಬಾಲಕಾಶ್ರಮದ ಹಳೆ ವಿದ್ಯಾರ್ಥಿಗಳ ವಾರ್ಷಿಕ ಸಮ್ಮಿಲನ ಕಾರ್ಯಕ್ರಮ ಜರಗಿತು. ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮೀ ಜಿತಕಾಮಾನಂದಜೀ ಮಾತನಾಡಿ, ಶಿಸ್ತು ಬದ್ಧ ಶಿಕ್ಷಣವನ್ನು ಇಲ್ಲಿ ಪಡೆದು ಜೀವನದಲ್ಲಿ ಉನ್ನತ ಹಂತಕ್ಕೆ ತಲಪಿರುವುದು ಸಂತಸದ ಸಂಗತಿ. ಆಶ್ರಮ ಎಂದಿಗೂ ನಿಮಗಾಗಿ ತೆರೆದಿದೆ ಎಂದರು.

Advertisement

ಆಶ್ರಮದ ಸಂಪರ್ಕ ಇರಲಿ
ಅಧ್ಯಕ್ಷತೆ ವಹಿಸಿದ್ದ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ಎ.ಶಿವಕುಮಾರ್‌ ಮಾತನಾಡಿ, ಪ್ರತಿಯೋರ್ವ ಹಳೆ
ವಿದ್ಯಾರ್ಥಿಯೂ ಆಶ್ರಮದ ಸಂಪರ್ಕ ಇಟ್ಟುಕೊಳ್ಳಬೇಕು ಎಂದರು. ಸ್ವಾಮೀ ಧರ್ಮವೃತಾನಂದಜಿಯವರು ಶುಭ ಹಾರೈಸಿದರು. ಸುಧಾಕರ ಶೆಟ್ಟಿ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. 

ಸಂಘದ ಬೆಳವಣಿಗೆಯಲ್ಲಿ ಸಕ್ರಿಯ ವಾಗಿ ದುಡಿಯುತ್ತಿರುವ 50ರ ದಶಕದ ಹಿರಿಯ ಹಳೆವಿದ್ಯಾರ್ಥಿ ಲಕ್ಶ್ಮೀ ನಾರಾಯಣ ಶೆಣೈ ಮತ್ತು ಸುಧಾಕರ ಶೆಟ್ಟಿಯವರನ್ನು ಶಾಲು ಹೊದೆಸಿ ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಹಳೆವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯ ಕ್ರಮ ನಡೆಯಿತು. ಕಾರ್ಯದರ್ಶಿ ಗಿರೀಶ್‌ ಕಾರ್ಯಕ್ರಮ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next