Advertisement

ಥಾಣೆ ಕ್ರೀಡಾಂಗಣದಲ್ಲಿ ಅಥ್ಲೀಟ್ಸ್‌ಗೆ ಕಿರಿಕಿರಿ

02:23 AM Feb 02, 2019 | |

ಥಾಣೆ: ಕ್ರಿಕೆಟ್ ಕೂಟಕ್ಕೆ ಅವಕಾಶ ನೀಡಿದ್ದರಿಂದ ಅಥ್ಲೀಟ್‌ಗಳಿಗೆ ಥಾಣೆಯ ಕ್ರೀಡಾಂಗಣದೊಳಕ್ಕೆ ಪ್ರವೇಶ ನಿರಾಕರಿಸಿದ ಘಟನೆ ನಡೆದಿದೆ. ಇದರಿಂದಾಗಿ ಖೇಲೋ ಇಂಡಿಯಾ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತೆ ರಿಲೇ ಓಟಗಾರ್ತಿ ಅದಿತಿ ಸೇರಿದಂತೆ 200ಕ್ಕೂ ಹೆಚ್ಚು ಅಥ್ಲೀಟ್‌ಗಳು ಸಮಸ್ಯೆಗೆ ಒಳಗಾಗಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

Advertisement

ಸ್ಪೈಕ್‌ ಶೂ ಹಾಕುವುದರಿಂದ ಹುಲ್ಲು ಹಾಳಾಗುತ್ತದೆ ಎನ್ನುವ ಕಾರಣಕ್ಕೆ ಕ್ರೀಡಾಂಗಣದ ಬಾಗಿಲನ್ನೇ ಮುಚ್ಚಿದ್ದಾರೆ. ಎಂದಿನಂತೆ ಅಭ್ಯಾಸಕ್ಕೆ ಬಂದ ಅಥ್ಲೀಟ್‌ಗಳಿಗೆ ಕ್ರೀಡಾಂಗಣದೊಳಗೆ ಪ್ರವೇಶಿಸಲು ಭದ್ರತಾ ಸಿಬ್ಬಂದಿಗಳು ಅವಕಾಶ ನೀಡಲಿಲ್ಲ. ಈ ವೇಳೆ ಮಾತಿನ ಚಕಮಕಿಯೂ ನಡೆದಿದೆ. ಅಥ್ಲೀಟ್‌ಗಳಿಗಾಗಿ ಇರುವ ಕ್ರೀಡಾಂಗಣವನ್ನು ಕ್ರಿಕೆಟ್‌ಗೆ ಏಕೆ ಕೊಟ್ಟಿದ್ದೀರಿ ಎನ್ನುವ ಪ್ರಶ್ನೆಗಳು ಕೂಡ ಕೇಳಿ ಬಂದಿವೆ. ಮುಂದೆ ಇದೇ ಕ್ರೀಡಾಂಗಣವನ್ನು ಮೇಲ್ದರ್ಜೆಗೇರಿಸಿ ಐಪಿಎಲ್‌ ಕೂಟದ ಕೆಲವು ಪಂದ್ಯಗಳನ್ನು ಆಯೋಜಿಸುವ ಕುರಿತಂತೆ ಚಿಂತನೆ ನಡೆದಿದೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next