Advertisement

Heavy Rain ಅಣ್ಣಾಲು ಸೇತುವೆ ಮುಳುಗಡೆ: ವಾಹನ ಸಂಚಾರ ಸ್ಥಗಿತ

12:51 AM Jul 05, 2024 | Team Udayavani |

ಹೆಬ್ರಿ: ಬುಧವಾರ ತಡರಾತ್ರಿ ಸುರಿದ ಭಾರೀ ಮಳೆಗೆ ಪೆರ್ಡೂರು ಸಮೀಪ ಹರಿಖಂಡಿಗೆಗೆ ಹೋಗುವ ಮಾರ್ಗದ ಅಣ್ಣಾಲು ಸೇತುವೆ ಮುಳುಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುವುದರ ಜತೆಗೆ ಪರಿಸರದ ಕೃಷಿ ಭೂಮಿ ಜಲಾವೃತಗೊಂಡಿದೆ.

Advertisement

ಗುರುವಾರ ಮುಂಜಾನೆಯಿಂದ ಸುಮಾರು ಎರಡು ತಾಸು ನೀರಿನ ಹರಿವು ಹೆಚ್ಚಾಗಿದ್ದು, ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

ಹರಿಖಂಡಿಗೆ ದೊಂಡೆರಂಗಡಿಯಿಂದ ಪೆರ್ಡೂರು, ಉಡುಪಿ ಕಡೆ ಕೆಲಸಕ್ಕೆ ಹಾಗೂ ಶಾಲೆಗೆ ಹೋಗುವ ವಿದ್ಯಾರ್ಥಿಗಳು ಸುತ್ತು ಬಳಸಿ ಹೋಗಬೇಕಾಯಿತು. ಸೇತುವೆಯ ಬಳಿಯ ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದೆ. ತೀರಾ ತಗ್ಗು ಪ್ರದೇಶದಲ್ಲಿ ಸೇತುವೆ ಇರುವುದರಿಂದ ಪ್ರತಿವರ್ಷ ಕೂಡ ಈ ಸಮಸ್ಯೆ ಎದುರಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next