Advertisement

ಲೋಕಪಾಲ: ಅಣ್ಣಾ ಹಜಾರೆ ಉಪವಾಸ ಸತ್ಯಾಗ್ರಹ ಮುಂದಕ್ಕೆ

04:05 PM Oct 02, 2018 | udayavani editorial |

ಅಹ್ಮದ್‌ನಗರ : ಖ್ಯಾತ ಗಾಂಧಿವಾದಿ, ಸಮಾಜಸೇವಾ ಕಾರ್ಯಕರ್ತ ಮತ್ತು ಭ್ರಷ್ಟಾಚಾರ ವಿರೋಧಿ ಆಂದೋಲನದ ಹರಿಕಾರ ಅಣ್ಣಾ ಹಜಾರೆ ಅವರು ಲೋಕಪಾಲ ನೇಮಕಾತಿಯನ್ನು ಆಗ್ರಹಿಸಿ ಇಂದಿನಿಂದ ನಡೆಸಲು ಉದ್ದೇಶಿಸಿದ್ದ ಉಪವಾಸ ಸತ್ಯಾಗ್ರಹವನ್ನು ಮುಂದೂಡಿದ್ದಾರೆ. 

Advertisement

ಮಹಾರಾಷ್ಟ್ರ ಸಚಿವ ಗಿರೀಶ್‌ ಮಹಾಜನ್‌ ಅವರೊಂದಿಗಿನ ಮಾತುಕತೆಯ ಫ‌ಲವಾಗಿ ಅಣ್ಣಾ ತಮ್ಮ ಪ್ರಸ್ತಾವಿತ ನಿರಶನವನ್ನು ಮುಂದೂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ. 

ಕೇಂದ್ರ ಸರಕಾರ ಲೋಕಪಾಲ ನೇಮಕಾತಿ ವಿಷಯದಲ್ಲಿ ಮೀನ ಮೇಷ ಎಣಿಸುತ್ತಿದೆ ಎಂದು ಆರೋಪಿಸಿದ್ದ ಅಣ್ಣಾ ಕೇಂದ್ರದ ನಿಲುವಿನ ವಿರುದ್ಧ ಮತ್ತು ಲೋಕಪಾಲರ ನೇಮಕಾತಿಯನ್ನು ಆಗ್ರಹಿಸಿ ತಾನು ಅ.2ರಿಂದ ನಿರಶನ ನಡೆಸುವುದಾಗಿ ಈ ಹಿಂದೆ ಘೋಷಿಸಿದ್ದರು. 

ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಧಿಕಾರಕ್ಕೆ ಬಂದದ್ದೇ ಲೋಕಪಾಲ ಆಂದೋಲನದ ಬಲದಲ್ಲಿ; ಹಾಗಿದ್ದರೂ ಅದು ಲೋಕಪಾಲ ನೇಮಿಸಲು ಮೀನ ಮೇಷ ಎಣಿಸುತ್ತಿರುವುದು ದುರದೃಷ್ಟಕರ ಎಂದು ಅಣ್ಣಾ ಟೀಕಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next