Advertisement

Ankola: ಶಿರೂರು ಗುಡ್ಡ ಕುಸಿತ ಪ್ರಕರಣ; ಗೋವಾದಿಂದ ಯಂತ್ರ; ಇಂದಿನಿಂದ ಶೋಧ ಕಾರ್ಯ

03:52 PM Sep 20, 2024 | Team Udayavani |

ಅಂಕೋಲಾ: ಶಿರೂರು ಗುಡ್ಡ ಕುಸಿತದಲ್ಲಿ ಕಾಣೆಯಾದ ಮೂವರ ಶೋಧಕ್ಕಾಗಿ ಗೋವಾದಿಂದ ಶಿರೂರಿಗೆ ಡ್ರೆಜ್ಜರ್ ಯಂತ್ರ ತಲುಪಿದ್ದು, ಸೆ.20ರ ಶುಕ್ರವಾರ 3ನೇ ಹಂತದ ಕಾರ್ಯಾಚರಣೆ ಆರಂಭವಾಗಿದೆ.

Advertisement

ಡ್ರೆಜ್ಜರ್ ಯಂತ್ರವನ್ನು ನದಿಯಲ್ಲಿ ಲಂಗರು ಹಾಕಿ ನಿಲ್ಲಿಸಲಾಗಿದ್ದು, ಡ್ರೆಜ್ಜರ್ ಮೇಲಿರುವ ಕ್ರೇನ್, ಹಿಟಾಚಿ ಸಹಾಯದಿಂದ ಪೈಪ್‌ ಅಳವಡಿಕೆ ಕಾರ್ಯ ಪ್ರಾರಂಭವಾಗಿದೆ.

ನೌಕಾನೆಲೆ ಗುರುತಿಸಿದ 4 ಸ್ಥಳಗಳಲ್ಲಿ ಮಣ್ಣು ತೆರವುಗೊಳಿಸಲು ಡ್ರೆಜ್ಜರ್ ಸಿದ್ದವಾಗಿದ್ದು, ಎನ್‌ಡಿಆರ್‌ಎಫ್, ಪೊಲೀಸ್, ತಾಲೂಕಾಡಳಿತದ ಸಿಬ್ಬಂದಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.

ಗುಡ್ಡಕುಸಿತ ದುರಂತದಲ್ಲಿ 11 ಜನ ಮೃತಪಟ್ಟಿದ್ದು, ಇದುವರೆಗೆ 8 ಮಂದಿಯ ಶವ ಮಾತ್ರ ಪತ್ತೆ ಮಾಡಲಾಗಿತ್ತು.

ಇನ್ನು ಶಿರೂರಿನ ಜಗನ್ನಾಥ ನಾಯ್ಕ, ಲೋಕೇಶ್, ಕೇರಳದ ಅರ್ಜುನ್‌ಗಾಗಿ 3ನೇ ಹಂತದ ಹತ್ತು ದಿನದ ಕಾರ್ಯಾಚರಣೆ ಇಂದಿನಿಂದ ನಡೆಯಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next